ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಬಿ.ಆರ್.ಅಂಬೇಡ್ಕರ್ ಮೊಮ್ಮಗ?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 20: ರಾಮ್ ನಾಥ್ ಕೋವಿಂದ್ ತನ್ನ ರಾಷ್ಟ್ರಪತಿ ಅಭ್ಯರ್ಥಿ ಎಂದು ಎನ್ ಡಿಎ ನಿನ್ನೆ (ಜೂನ್ 19) ಘೋಷಿಸುತ್ತಿದ್ದಂತೆಯೇ ಒಮ್ಮೆ ಇಡೀ ದೇಶದ ಜನತೆಗೂ ಅಚ್ಚರಿಯಾಗಿದ್ದು ಸತ್ಯ. ಯಾಕಂದ್ರೆ ಕೋವಿಂದ್ ಯಾರೂ ನಿರೀಕ್ಷಿಸದ ಹೆಸರು. ದಲಿತ ಅಭ್ಯರ್ಥಿಯಾಗಿರುವುದರಿಂದ ಅವರನ್ನು ವಿಪಕ್ಷಗಳೂ ಬೆಂಬಲಿಸುತ್ತವೆ ಎಂಬ ಭಾವನೆ ಅವರ ಆಯ್ಕೆಯಲ್ಲಿ ಅಡಗಿದ್ದಿರಬಹುದು. ಆದರೆ ಇದೀಗ ವಿಪಕ್ಷಗಳು ತಾವೂ ಮತ್ತೊಬ್ಬ ದಲಿತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿಗೆ ಅಚ್ಚರಿ ನೀಡಬಹುದು!

ದಲಿತ ವಿರೋಧಿ ಪಟ್ಟಕಟ್ಟಿಕೊಳ್ಳಲು ವಿರೋಧಿಗಳು ಸಿದ್ಧವೆ?ದಲಿತ ವಿರೋಧಿ ಪಟ್ಟಕಟ್ಟಿಕೊಳ್ಳಲು ವಿರೋಧಿಗಳು ಸಿದ್ಧವೆ?

ಸಂವಿಧಾನ ಶಿಲ್ಪಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸುವ ಎಲ್ಲಾ ಸಾಧ್ಯತೆಗಳಿವೆ. ಹಾಗೆಯೇ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ಸಹ ದಲಿತ ಅಭ್ಯರ್ಥಿಯಾಗಿರುವುದರಿಂದ ಅವರನ್ನೂ ಪರಿಗಣಿಸಿದರೆ ಅಚ್ಚರಿಯೇನಿಲ್ಲ.

Dr Ambedkar's grandson, Oppositions' president candidate?

ಬಿಜೆಪಿ ಘೋಷಿಸಿರುವ ಅಭ್ಯರ್ಥಿಯ ಕುರಿತು ತಮ್ಮ ಒಪ್ಪಿಗೆಯಿಲ್ಲ, ತಾವು ಬೇರೆಯದೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆಂದು ಈಗಾಗಲೇ ವಿಪಕ್ಷಗಳು ಹೇಳಿವೆ. ಆದ್ದರಿಂದ ಈ ಬಾರಿಯ ರಾಷ್ಟ್ರಪತಿ ಚುನಾವಣೆ ಅವಿರೋಧ ಆಯ್ಕೆಯಾಗದೆ, ಜುಲೈ 17 ರಂದು ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಜು.20 ರಂದು ಹೊರಬೀಳುವ ಫಲಿತಾಂಶದಲ್ಲಿ ದೇಶದ ಪ್ರಥಮ ಪ್ರಜೆಯ ಹುದ್ದೆಯನ್ನು ಯಾರು ಅಲಂಕರಿಸಲಿದ್ದಾರೆ ಎಂಬುದು ತಿಳಿಯಲಿದೆ.

English summary
The ruling BJP on Monday said that Ram Nath Kovind will be their candidate for the next President of India. The opposition has clearly said that he will not be a consensus candidate. This would mean an election would be held on July 17 as the opposition gets ready to field its own candidate. Many in the opposition are in a fix as the BJP announced a Dalit candidate. The opposition is now considering the names of Prakash Ambedkar, grandson of Dr B R Ambedkar and former speaker Meira Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X