ತ್ವರಿತ ಅಲರ್ಟ್ ಗಳಿಗಾಗಿ
For Daily Alerts
LIVE
ಮುಗಿಯದ ಅನರ್ಹ ಶಾಸಕರ ಬಿಕ್ಕಟ್ಟು, ಪ್ರಕರಣ ನಾಳೆಗೆ ಮುಂದೂಡಿಕೆ
ನವದೆಹಲಿ, ಸೆಪ್ಟೆಂಬರ್ 25: ಅನರ್ಹ ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಹೂಡಿದ್ದ ಅರ್ಜಿಯ ವಿಚಾರಣೆ ಇಂದು ಮುಂದುವರೆದಿದ್ದು, ಬಹುಮುಖ್ಯ ಆದೇಶ ಇಂದು ಹೊರಬೀಳುವ ನಿರೀಕ್ಷೆ ಇದೆ.
ಹದಿನೇಳು ಅನರ್ಹ ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಅರ್ಜಿ ಹಾಕಿದ್ದರು. ಅನರ್ಹ ಶಾಸಕರ ಪರವಾಗಿ ವಕೀಲ ಮುಕುಲ್ ರೊಹ್ಟಗಿ ಅವರು ವಾದ ಮಂಡಿಸಿದ್ದಾರೆ.
ಸ್ಪೀಕರ್ ಅವರ ಅನರ್ಹತೆಯ ಆದೇಶವು ದುರುದ್ದೇಶದಿಂದ ಕೂಡಿದ್ದು, ಪಕ್ಷ ನಿಷ್ಠರಾಗಿ ಅವರು ಅನರ್ಹರನ್ನಾಗಿ ಮಾಡಿದ್ದಾರೆ. ಹಾಗಗಿ ಅನರ್ಹತೆಯನ್ನು ರದ್ದು ಮಾಡಬೇಕು ಎಂದು ಮುಕುಲ್ ರೊಹ್ಟಗಿ ವಾದ ಮಂಡಿಸಿದ್ದಾರೆ.
ಎರಡು ಗಂಟೆಗಳಷ್ಟು ಸುದೀರ್ಘವಾಗಿ ವಾದ ಮಂಡನೆ ಆಗುತ್ತಿದ್ದು, ಉಪಚುನಾವಣೆಯನ್ನು ಮುಂದೂಡಬೇಕು ಅಥವಾ ಚುನಾವಣೆಗೆ ಸ್ಪರ್ಧಿಸಲು ಅನರ್ಹ ಶಾಸಕರಿಗೆ ಅವಕಾಶ ನೀಡಬೇಕು ಎಂದು ಮುಕುಲ್ ರೊಹ್ಟಗಿ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ಮುಂದೆ ವಾದವಿಟ್ಟಿದ್ದಾರೆ.
Newest FirstOldest First
ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕರನ್ನು ಅನರ್ಹ ಮಾಡಿದ್ದನ್ನು ಈಗಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರ ವಕೀಲರು ಸಮರ್ಥಿಸಿಲ್ಲ. ಇದು ಇಂದಿನ ವಿಚಾರಣೆಯ ಪ್ರಮುಖ ಅಂಶಗಳಲ್ಲೊಂದು.
ನಾಳೆ ಲಿಖಿತ ವಾದವನ್ನು ಸಲ್ಲಿಸುವುದಾಗಿ ಕಾಂಗ್ರೆಸ್ ಪರ ವಕೀಲ ದೇವದತ್ತ ಕಾಮತ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮಾತ್ರವಲ್ಲದೆ, ಇದೇ ಪ್ರಕರಣದಲ್ಲಿ ಪ್ರತಿವಾದಿಗಳಾದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದ್ದು, ಅವರ ಪರ ವಕೀಲರು ನಾಳೆ ವಾದ ಮಂಡಿಸಲಿದ್ದಾರೆ.
ಅನರ್ಹ ಶಾಸಕರ ಪರ ವಕೀಲರ ವಾದ ಮುಗಿದಿದ್ದು, ಕಾಂಗ್ರೆಸ್ ಪರ ವಕೀಲ ದೇವದತ್ತ ಕಾಮತ್ ಅವರು ತಮ್ಮ ವಾದವನ್ನು ನಾಳೆ ಸಲ್ಲಿಸುತ್ತೇವೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ. ಅತೃಪ್ತ ಶಾಸಕರ ಪ್ರಕರಣ ನಾಳೆಗೆ ಮುಂದೂಡುವ ಸಾಧ್ಯತೆ ಇದೆ.
ಅನರ್ಹ ಶಾಸಕ ಆರ್.ಶಂಕರ್ ಅವರ ಪರ ವಕೀಲರು ವಾದ ಮಂಡಿಸಿದರು. ಕೆಪೆಜೆಪಿ ಪಕ್ಷ ಪೂರ್ಣವಾಗಿ ಕಾಂಗ್ರೆಸ್ ಜೊತೆ ವಿಲಿನಗೊಳಿಸಲಾಗಿಲ್ಲ ಹಾಗಿದ್ದರೂ ನನ್ನನ್ನು ಕಾಂಗ್ರೆಸ್ ಶಾಸಕ ಎಂದು ಪರಿಗಣಿಸಿ ಅನರ್ಹಗೊಳಿಸಲಾಗಿದೆ- ಆರ್.ಶಂಕರ್ ಪರ ವಕೀಲ
ಶ್ರೀಮಂತ ಪಾಟೀಲ್ ಅವರು ರಾಜೀನಾಮೆ ನೀಡದೇ ಇದ್ದರೂ ಸಹ ಅವರನ್ನು ಅನರ್ಹಗೊಳಿಸಲಾಗಿದೆ. ಅವರು ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿದ್ದರೂ ಅದನ್ನೇ ನೆಪ ಮಾಡಿಕೊಂಡು ಅನರ್ಹ ಮಾಡಲಾಗಿದೆ- ಶ್ರೀಮಂತ್ ಪಾಟೀಲ್ ಪರ ವಕೀಲ ವಿವಿ ಗಿರಿ
ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಅನರ್ಹಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಪರ ವಕೀಲರು ವಾದ ಮಂಡನೆ ಆರಂಭಿಸಿದ್ದಾರೆ.
ರಾಜೀನಾಮೆ ಅಥವಾ ಅನರ್ಹತೆಯಿಂದ ಶಾಸಕ ಸ್ಥಾನ ತೆರವಾಗಿದೆ. ಈಗ ಉಪಚುನಾವಣೆ ಘೋಷಣೆ ಆಗಿದೆ. ಅನರ್ಹತೆಯ ಕಾರಣದಿಂದ ಶಾಸಕರು ಚುನಾವಣೆ ಸ್ಪರ್ಧೆಯಿಂದ ತಪ್ಪುವಂತಾಗಬಾರದು- ಮುಕುಲ್ ರೊಹ್ಟಗಿ
Advertisement
ರಾಜೀನಾಮೆ ನೀಡಿದ ನಂತರ ಶಾಸಕರ ಮೇಲೆ ಒತ್ತಡ ಹೇರಲಾಗಿತ್ತು. ಶಾಸಕರು ರಾಜೀನಾಮೆ ವಾಪಸ್ ಪಡೆಯುವಂತೆ ಒತ್ತಡ ಹೇರಲಾಗಿತ್ತು. ರಾಜೀನಾಮೆ ಹಿಂಪಡೆಯಲು ಶಾಸಕರು ಒಪ್ಪದೇ ಇದ್ದ ಕಾರಣಕ್ಕೆ ಅವರನ್ನು ಅನರ್ಹರನ್ನಾಗಿ ಮಾಡಲಾಗಿದೆ. ಇದರಲ್ಲಿ ದುರುದ್ದೇಶ ಸ್ಪಷ್ಟವಾಗಿ ಕಾಣುತ್ತಿದೆ- ಮುಕುಲ್ ರೊಹ್ಟಗಿ
ಸರ್ಕಾರ ಉರುಳುತ್ತದೆಯೋ, ಬೀಳುತ್ತದೆಯೋ ಎನ್ನುವುದು ಸ್ಪೀಕರ್ ಅವರಿಗೆ ಸಂಬಂಧಪಡದ ವಿಷಯ, ಸ್ಪೀಕರ್ ಅವರು ಸರ್ಕಾರದ ಪರವಾಗಿ ಕೆಲಸ ಮಾಡಿರುವುದು ಈ ಪ್ರಕರಣದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ- ಮುಕುಲ್ ರೊಹ್ಟಗಿ
ಸ್ಪೀಕರ್ ಕಚೇರಿ ಪರ ವಕೀಲ ತುಷಾರ್ ಮೆಹ್ತಾ ವಾದ ಮಂಡಿಸಿ, ಸದನದ ಒಳಗೆ ಶಾಸಕರ ನಡವಳಿಕೆಯ ಮೇಲೆ ನಿಗಾ ಇಡುವುದು ಸ್ಪೀಕರ್ ಕರ್ತವ್ಯ ಆದರೆ ಈ ಹಿಂದಿನ ಸ್ಪೀಕರ್ ಅವರು ಸದನದ ಹೊರಗೆ ಶಾಸಕರ ನಡುವಳಿಕೆ ನೋಡಿ ಅನರ್ಹಗೊಳಿಸಿದ್ದೇನೆ ಎಂದು ಹೇಳಿದ್ದಾರೆ. ಇದು ಒಪ್ಪುವಂತಿಲ್ಲ ಎಂದು ತುಷಾರ್ ಮೆಹ್ತಾ ಹೇಳಿದರು.
ಅನರ್ಹ ಶಾಸಕ ಸುಧಾಕರ್ ಪರ ವಾದ ಮಂಡಿಸಿದ ಸುಂದರಂ ಅವರು, ರಾಜೀನಾಮೆ ನೀಡುವುದು ಶಾಸಕನ ಹಕ್ಕುಗಳಲ್ಲಿ ಒಂದು. ಸುಧಾಕರ್ ಅವರು ರಾಜೀನಾಮೆ ನೀಡಿದ್ದಾರೆ ಆದರೆ ವಿಪ್ ಉಲ್ಲಂಘನೆ ಮಾಡಿಲ್ಲ. ಪಕ್ಷ ತ್ಯಜಿಸಿದರೆ ಅಥವಾ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಮಾತ್ರ ಪಕ್ಷಾಂತರ ತಡೆ ಕಾಯ್ದೆ ಅಡಿ ಬರುತ್ತದೆ- ಸುಧಾಕರ್ ಪರ ವಕೀಲ ಸುಂದರಂ
ಚುನಾಯಿತರನ್ನು ಅನರ್ಹಗೊಳಿಸಲು ಹಲವು ನಿಯಮಗಳಿವೆ ಆದರೆ ಈ ಪ್ರಕರಣದಲ್ಲಿ ಅನರ್ಹತೆಯೇ ನಿಯಮಬಾಹಿರವಾಗಿದೆ ಹಾಗಾಗಿ ಅನರ್ಹತೆಯನ್ನು ರದ್ದುಗೊಳಿಸಬೇಕು ಅಥವಾ ಚುನಾವಣೆಗೆ ಸ್ಪರ್ಧಿಸಲು ಆದರೂ ಅವಕಾಶ ಕೊಡಬೇಕು -ಮುಕುಲ್ ರೊಹ್ಟಗಿ
Advertisement
Comments
English summary
Disuqlified MLAs application hearing in Supreme court. Lawyer Mukul Rogtagi submiting long debat in favor of disqualified MLAs.