ದೆಹಲಿ ಹಿಂಸಾಚಾರ: ಪರಿಸ್ಥಿತಿ ಹತೋಟಿಗೆ ಬಂದರೂ ಸಾವಿನ ಸಂಖ್ಯೆ ಏರಿಕೆ
ನವದೆಹಲಿ,
ಫೆಬ್ರವರಿ.27:
ಕಳೆದ
ನಾಲ್ಕು
ದಿನಗಳಿಂದ
ಹಿಂಸಾಚಾರಕ್ಕೆ
ನಲುಗಿದ್ದ
ರಾಷ್ಟ್ರ
ರಾಜಧಾನಿಯಲ್ಲಿ
ಪರಿಸ್ಥಿತಿ
ಗುರುವಾರ
ಕೊಂಚ
ಹತೋಟಿಗೆ
ಬಂದಿದೆ.
ಇದುವರೆಗೂ
ನಡೆದ
ಹಿಂಸಾಚಾರದಲ್ಲಿ
27
ಮಂದಿ
ಪ್ರಾಣ
ಬಿಟ್ಟಿದ್ದು,
200ಕ್ಕೂ
ಅಧಿಕ
ಮಂದಿ
ಗಾಯಗೊಂಡಿದ್ದಾರೆ.
ದೆಹಲಿಯಲ್ಲಿ
ಬುಧವಾರವೇ
ಪರಿಸ್ಥಿತಿ
ತಿಳಿಯಾಗಿದ್ದು,
ಹಿಂಸಾಚಾರ
ಪೀಡಿತ
ಪ್ರದೇಶಗಳಲ್ಲಿ
ಯಾವುದೇ
ಘರ್ಷಣೆಗಳು
ನಡೆದಿರುವ
ಬಗ್ಗೆ
ವರದಿಯಾಗಿಲ್ಲ
ಎಂದು
ತಿಳಿದು
ಬಂದಿದೆ.
ರಾಷ್ಟ್ರೀಯ
ರಕ್ಷಣಾ
ಸಲಹೆಗಾರ
ಅಜಿತ್
ದೋವಲ್
ಹಿಂಸಾಚಾರ
ಪೀಡಿತ
ಪ್ರದೇಶಗಳಿಗೆ
ಬುಧವಾರ
ಭೇಟಿ
ನೀಡಿದರು.
ದೆಹಲಿ
ಹಿಂಸಾಚಾರ
ತಡೆಗೆ
'ಜೇಮ್ಸ್
ಬಾಂಡ್'
ಅಜಿತ್
ದೋವಲ್
ಈಶಾನ್ಯ
ದೆಹಲಿಯಲ್ಲಿ
ಆತಂಕದಲ್ಲಿದ್ದ
ಜನರಿಗೆ
ಧೈರ್ಯ
ತುಂಬಿದ
ಅಜಿತ್
ದೋವಲ್,
ನಿಮ್ಮ
ರಕ್ಷಣೆಗೆ
ಕೇಂದ್ರ
ಸರ್ಕಾರ
ಮತ್ತು
ರಕ್ಷಣಾ
ಸಿಬ್ಬಂದಿ
ಬದ್ಧರಾಗಿದ್ದಾರೆ.
ಯಾರೊಬ್ಬರೂ
ಆತಂಕ
ಪಡುವ
ಅಗತ್ಯವಿಲ್ಲ.
ನಿಮ್ಮ
ಮನೆಗಳಲ್ಲಿ
ಸುರಕ್ಷಿತರಾಗಿರಿ
ಎಂದು
ಸಲಹೆ
ನೀಡಿದರು.
ದೇಶವನ್ನು
ಪ್ರೀತಿಸುವವರು,
ನೆರೆಹೊರೆಯವರನ್ನೂ
ಗೌರವಿಸಬೇಕು:
ಭಾರತ
ದೇಶವನ್ನು
ಪ್ರೀತಿಸುವ
ಪ್ರತಿಯೊಬ್ಬರು,
ತಮ್ಮ
ಸಮಾಜವನ್ನು
ಪ್ರೀತಿಸಬೇಕು,
ನೆರೆಹೊರೆಯವರ
ಜೊತೆ
ಸಹಬಾಳ್ವೆಯಿಂದ
ಬದುಕಬೇಕು
ಎಂದು
ರಾಷ್ಟ್ರೀಯ
ರಕ್ಷಣಾ
ಸಲಹೆಗಾರ
ಅಜಿತ್
ದೋವಲ್
ಮನವಿ
ಮಾಡಿಕೊಂಡರು.
ಜನರು
ಸಮಸ್ಯೆಯನ್ನು
ಬಗೆಹರಿಸಲು
ಪ್ರಯತ್ನಿಸಬೇಕೇ
ವಿನಃ,
ಹೆಚ್ಚುಸುವ
ನಿಟ್ಟಿನಲ್ಲಿ
ಪ್ರಯತ್ನಿಸಬಾರದು
ಎಂದು
ಹೇಳಿದರು.