ದೆಹಲಿಯಲ್ಲಿ ಜಿಗ್ನೇಶ್ ಯಾತ್ರೆಗೆ ಅನುಮತಿ ನಿರಾಕರಣೆ
ನವದೆಹಲಿ, ಜನವರಿ, 09: ನವದೆಹಲಿಯ ಪಾರ್ಲಿಪೆಂಟ್ ರಸ್ತೆಯಲ್ಲಿ ಗುಜರಾತಿನ ವಡ್ಗಾಂ ಶಾಸಕ ಮತ್ತು ದಲಿತ ನಾಯಕ ಜಿಗ್ನೇಶ್ ಮೆವಾನಿ ನಡೆಸಲು ಇಚ್ಛಿಸಿದ್ದ ಯಾತ್ರೆಗೆ ಇದುವರೆಗೂ ಅನುಮತಿ ದೊರಕಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ನ್ಯಾಯ ಯಾತ್ರೆ ಅಥವಾ ಯುವ ಹೂಂಕಾರ್ rally ಎಂಬ ಹೆಸರಿನಲ್ಲಿ ಜಾಥಾ ನಡೆಸಲು ಜಿಗ್ನೇಶ್ ಮೇವಾನಿ ಮತ್ತು ಅಸ್ಸಾಮಿನ ರೈತ ಮುಖಂಡ ಅಖಿಲ್ ಗೋಗೋಯ್ ನಿರ್ಧರಿಸಿದ್ದರು. ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಈ ಜಾಥಾಕ್ಕೆ ಅನುಮತಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
21ನೇ ಶತಮಾನದ ಜಗತ್ತಿನ ಅದ್ಭುತ ನಟ ಭಾರತದವರು: ಮೋದಿ ಬಗ್ಗೆ ವ್ಯಂಗ್ಯ
ಆದರೆ ಅಸಮ್ಮತಿಯ ನಡುವೆಯೂ ತಮ್ಮ ಯೋಜನೆಯಂತೆ ಜಾಥಾ ನಡೆಸಲಾಗುವುದು ಎಂದು ಮೆವಾನಿ ಹೇಳಿದ್ದಾರೆ.
2018ರ ಚುನಾವಣೆ : ಜಿಗ್ನೇಶ್ ಮೇವಾನಿ ಹೇಳಿದ್ದೇನು?
ಪುಣೆಯಲ್ಲಿ ಜಿಗ್ನೇಶ್ ಮೆವಾನಿ ಅವರ ಪ್ರಚೋದನಾಕಾರಿ ಭಾಷಣದಿಂದಾಗಿ ಇತ್ತೀಚೆಗೆ ತಾನೇ ಮಹಾರಾಷ್ಟ್ರದಾದ್ಯಂತ ಗಲಭೆ ಏರ್ಪಟ್ಟ ಹಿನ್ನೆಲೆಯಲ್ಲಿ ಮತ್ತೆ ಇಂಥ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬಾರದೆಂಬ ಉದ್ದೇಶಕ್ಕೆ ಯಾತ್ರೆಗೆ ಅನುಮತಿ ನೀಡಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.