ದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವಕ್ಕೆ ಕಾರಣವಾದ ಇದೊಂದು ಘಟನೆ!
ನವದೆಹಲಿ, ಮೇ 11: ಮಂಗಳವಾರ ರಾತ್ರಿ ದೆಹಲಿ-ಮೀರತ್ ಕಾರಿಡಾರ್ನ 50 ಟನ್ ಸಿಮೆಂಟೆಡ್ ವಿಭಾಗವು ಕ್ರೇನ್ ತಂತಿ ತುಂಡಾಗಿ ರಸ್ತೆಯ ಮೇಲೆ ಬಿದ್ದಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಈ ಘಟನೆಯಿಂದ ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಪ್ರಾಥಮಿಕ ವರದಿಯ ಪ್ರಕಾರ ದೆಹಲಿ ಅಗ್ನಿಶಾಮಕ ದಳ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ದೆಹಲಿ-ಮೀರತ್ ಕಾರಿಡಾರ್ನ 50 ಟನ್ ಸಿಮೆಂಟೆಡ್ ವಿಭಾಗದ ಹಠಾತ್ ಕುಸಿತದಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ದೆಹಲಿ: ಹಳದಿ ಮಾರ್ಗದ ಈ ನಿಲ್ದಾಣಗಳಲ್ಲಿ ಡಿ.30ರಂದು ಮೆಟ್ರೋ ಸೇವೆ ಸ್ಥಗಿತ
50 ಟನ್ ತೂಕದ ಭಾರೀ ಸಿಮೆಂಟೆಡ್ ವಿಭಾಗದ ಹಠಾತ್ ಕುಸಿತದಿಂದ ಸ್ಥಳದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಸ್ಥಳೀಯರು ಕೂಡ ಭೂಕಂಪನ ಸಂಭವಿಸುತ್ತಿದೆಯೇ? ಎಂದು ಭಾವಿಸಿದ್ದರು. ಆದರೆ ತದನಂತರದಲ್ಲಿ ಈ ಸಿಮೆಂಟೆಡ್ ವಿಭಾಗದ ಕುಸಿತದಿಂದ ಭೂಮಿ ಕಂಪಿಸಿದಂತಾಗಿದೆ ಎಂಬುದು ತಿಳಿದು ಬಂದಿದೆ.
ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ: ದೆಹಲಿ-ಮೀರತ್ ಕಾರಿಡಾರ್ನ 50 ಟನ್ ಸಿಮೆಂಟೆಡ್ ವಿಭಾಗವು ಗೊತ್ತುಪಡಿಸಿದ ಮೀಸಲು ಪ್ರದೇಶದೊಳಗೆ ಬಿದ್ದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಎರಡು ಸೇತುವೆಗಳನ್ನು ಸಂಪರ್ಕಿಸಲು ಈ ವಿಭಾಗವನ್ನು ನಿರ್ಮಿಸಲಾಗಿತ್ತು.