ದೆಹಲಿಯಲ್ಲೊಂದು ಹೇಯ ಕೃತ್ಯ: ಪತ್ನಿ, ಮಕ್ಕಳನ್ನು ಕೊಚ್ಚಿ ಕೊಂದ ತಂದೆ
ನವದೆಹಲಿ, ಜೂನ್ 22: ಪತ್ನಿ ಮತ್ತು ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಕೊಚ್ಚಿ ಕೊಂದ ಹೀನಾತಿಹೀನ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದಕ್ಷಿಣ ದೆಹಲಿಯ ಮೆಹ್ರೌಲಿ ಎಂಬಲ್ಲಿ ವಾಸವಿದ್ದ ಉಪೇಂದ್ರ ಶುಕ್ಲಾ ಎಂಬಾತ ಖಾಸಗಿ ಟ್ಯೂಟರ್ ಆಗಿದ್ದ. ಶನಿವಾರ ಬೆಳಗ್ಗಿನ ಜಾವ ಪತ್ನಿ ಮತ್ತು ಮಕ್ಕಳ ಕತ್ತು ಸೀಳಿ ಕೊಂದಿರುವ ಈತ ಮನೆಯಲ್ಲಿ ಪತ್ರವೊಂದನ್ನು ಬರೆದಿಟ್ಟು ಪರಾರಿಯಾಗಿದ್ದ.
ಆತ ಬರೆದಿಟ್ಟ ಪತ್ರದಲ್ಲಿ, ತಾನೇ ಪತ್ನಿ ಮತ್ತು ಮಕ್ಕಳನ್ನು ಕೊಂದಿದ್ದಾಗಿ ಬರೆದಿದ್ದ. ಆದರೆ ಅದಕ್ಕೆ ಕಾರಣವನ್ನು ಹೇಳಿರಲಿಲ್ಲ. ಚಾಕುವಿನ ಮೂಲಕ ಪತ್ನಿ ಮತ್ತು ಎರಡು ತಿಂಗಳ ಶಿಶು ಸೇರಿದಂತೆ ಮೂವರು ಮಕ್ಕಳ ಕತ್ತನ್ನು ಸೀಳಿ ಕೊಲೆ ಮಾಡಿದ್ದ ಉಪೇಂದ್ರ ನಂತರ ನಾಪತ್ತೆಯಾಗಿದ್ದ.
ಬೆಳಿಗ್ಗೆ ಎಷ್ಟು ಹೊತ್ತಾದರೂ ರೂಮಿನ ಬಾಗಿಲು ತೆರಯದಿರುವುದನ್ನು ಕಂಡ ಆರೋಪಿ ಉಪೇಂದ್ರ ಶುಕ್ಲಾ ತಾಯಿ, ಹಲವಾರು ಬಾರಿ ಕೋಣೆಯ ಬಾಗಿಲು ತಟ್ಟಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಆತಂಕಗೊಂಡು ನೆರೆಹೊರೆಯವರನ್ನು ಕರೆದಿದ್ದಾರೆ. ನಂತರ ಬಾಗಿಲು ಒಡೆದು ನೋಡಿದಾಗ ದೇಹ ತುಂಡಾಗಿ ಬಿದ್ದಿರುವುದು ಕಾಣಿಸಿದೆ.
ಪೊಲಿಸರು ಈಗಾಗಲೇ ಶುಕ್ಲಾನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದೆ. ತಾನು ಖಿನ್ನತೆಯಿಂದ ಬಳಲುತ್ತಿದ್ದೆ ಎಂದಿರುವ ಶುಕ್ಲಾ ಕೊಲೆ ಮಾಡಲು ಕಾರಣವೇನು ಎಂಬುದನ್ನು ಇದುವರೆಗೂ ಬಾಯಿಬಿಟ್ಟಿಲ್ಲ. ತನಿಖೆ ಮುಂದುವರಿದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.