ತಾರಕಕ್ಕೇರಿದ ಕೇಂದ್ರ ಹಾಗೂ ದೆಹಲಿ ಸರ್ಕಾರದ ನಡುವಿನ ಹಗ್ಗಜಗ್ಗಾಟ
ನವದೆಹಲಿ, ಜೂನ್ 6: ದೆಹಲಿ ಸರ್ಕಾರ ಘೋಷಿಸಿದ್ದ ಮನೆ ಮನೆಗೆ ಪಡಿತರ ಯೋಜನೆಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ತಡೆ ನೀಡಿದ್ದಾರೆ. ಈ ಯೋಜನೆಗೆ ಸರ್ಕಾರ ಪೂರ್ವಾನುಮತಿಯನ್ನು ಪಡೆದುಕೊಂಡಿಲ್ಲ ಗವರ್ನಲ್ ಕಾರಣವನ್ನು ನೀಡಿದ್ದಾರೆ. ಈ ಬೆಳವಣಿಗೆಯ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
Recommended Video
"ಪಿಜ್ಜಾವನ್ನು ಮನೆಗೆ ತಲುಪಿಸುವುದಾದರೆ ಪಡಿತರವನ್ನು ಯಾಕೆ ಮನೆಗೆ ಹಂಚಬಾರದು" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇನ್ನು ಈ ಯೋಜನೆಗಾಗಿ ಕೇಂದ್ರ ಸರ್ಕಾರದ ಬಳಿ ಐದು ಬಾರಿ ಅನುಮತಿಯನ್ನು ಕೇಳಿರುವುದಾಗಿಯೂ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ಗಳಿಗೆ ಮಲಯಾಳಂ ಮಾತನಾಡದಂತೆ ನಿಷೇಧ
ವರ್ಚುವಲ್ ಮಾಧ್ಯಮಗೋಷ್ಟಿಯಲ್ಲಿ ಭಾಗಿಯಾಗಿದ್ದ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದರು. "ಕಾನೂನಿನ ಪ್ರಕಾರ ಈ ರೀತಿಯ ಯೋಜನೆಗಳಿಗೆ ಅನುಮತಿಯನ್ನು ಪಡೆಯುವ ಅವಶ್ಯಕತೆಯಿಲ್ಲದಿದ್ದರೂ ಕೇಂದ್ರ ಸರ್ಕಾರದ ಬಳಿ ನಾವು ಐದು ಬಾರಿ ಅನುಮತಿಯನ್ನು ಕೇಳಿದ್ದೇವೆ" ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ
"ಪಡಿತರ ಮಾಫಿಯಾ ವಿರುದ್ಧ ಮೊದಲ ಬಾರಿಗೆ ಸರ್ಕಾರ ಹೆಜ್ಜೆಯನ್ನು ಇಟ್ಟಿತ್ತು. ಆದರೆ ಆ ಮಾಫಿಯಾ ಎಷ್ಟು ಬಲಿಷ್ಟವಾಗಿದೆಯೆಂದರೆ ಜಾರಿಗೆ ಬರುವ ಒಂದು ವಾರಕ್ಕೆ ಮುನ್ನ ಯೋಜನೆ ಜಾರಿಗೆ ಬರುವುದನ್ನು ರದ್ದುಗೊಳಿಸಲಾಗಿದೆ" ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ದೆಹಲಿ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಇಮ್ರಾನ್ ಹುಸೇನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಲೆಫ್ಟಿನೆಂಟ್ ಗವರ್ನಲ್ ಅವರ ನಡೆ ರಾಜಕೀಯ ದುರುದ್ಧೇಶದಿಂದ ಕೂಡಿದೆ ಎಂದಿದ್ದಾರೆ. ಈಗಿನ ಕಾನೂನಿನ ಪ್ರಕಾರ ಘೋಷಿಸಿರುವ ಯೋಜನೆಗೆ ಅನುಮತಿ ಬೇಕಿಲ್ಲ. ಹಾಗಿದ್ದರೂ ಈ ಮಹತ್ವದ ಯೋಜನೆಯ ಜಾರಿ ವಿಚಾರವಾಗಿ ಪ್ರತಿ ಹಂತದಲ್ಲಿಯೂ ಮಾಹಿತಿ ನೀಡುತ್ತಾ 2018ರ ಬಳಿಕ 6 ಬಾರಿ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದೇವೆ ಎಂದಿದ್ದಾರೆ.