ದೆಹಲಿ: ಗುಟ್ಕಾ, ಪಾನ್ ಮಸಾಲಕ್ಕೆ ತಾತ್ಕಾಲಿಕ ನಿಷೇಧ
ನವದೆಹಲಿ, ಏಪ್ರಿಲ್ 15: ಗುಟ್ಕಾ, ಪಾನ್ ಮಸಾಲಾ, ಜರ್ದಾ ಮತ್ತು ಖೈನಿ ಸೇರಿದಂತೆ ಜಿಗಿಯಬಲ್ಲ ಎಲ್ಲಾ ತಂಬಾಕು ಪದಾರ್ಥಗಳ ಮಾರಾಟವನ್ನು ನಿಷೇಧಿಸಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಆದೇಶ ಹೊರಡಿಸಿದೆ. ಏಪ್ರಿಲ್ 15ರಿಂದ ಒಂದು ವರ್ಷಗಳ ಕಾಲ ದೆಹಲಿಯಲ್ಲಿ ಈ ನಿಷೇಧ ಜಾರಿಯಲ್ಲಿರಲಿದೆ.
ದೆಹಲಿ
ಸರ್ಕಾರ
ಇಂದಿನಿಂದ
ಒಂದು
ವರ್ಷಗಳ
ಕಾಲ
ರಾಜ್ಯದಲ್ಲಿ
ಗುಟ್ಕಾ,
ಪಾನ್
ಮಸಾಲಾ,
ಜರ್ದಾ
ಮತ್ತು
ಖೈನಿ
ಸೇರಿದಂತೆ
ಜಿಗಿಯಬಲ್ಲ
ಎಲ್ಲಾ
ತಂಬಾಕು
ಪದಾರ್ಥಗಳ
ಮಾರಾಟವನ್ನು
ನಿಷೇಧಿಸಿದೆ.
ಇದಕ್ಕೆ
ಸಂಬಂಧಿಸಿದಂತೆ
ಆಹಾರ
ಸುರಕ್ಷತೆ
ಇಲಖೆ
ಗುರುವಾರವೇ
ಜಾಗೃತಿ
ಮೂಡಿಸುವ
ಕಾರ್ಯ
ಆರಂಭಿಸಿದೆ.
2012ರಲ್ಲಿ ತಂಬಾಕು ಪದಾರ್ಥಗಳ ಮೇಲೆ ನಿಷೇಧ ಹೇರುವಂತೆ ಅಂದಿನ ದೆಹಲಿ ಸರ್ಕಾರ ಆದೇಶ ಹೊರಡಿಸಿತ್ತು. ಅದರೆ, ಆಹಾರ ಇಲಾಖೆ ಸದರಿ ಆದೇಶವನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ. ಹಂತ ಹಂತವಾಗಿ ನಿಷೇಧ ಜಾರಿ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಅದರಂತೆ ಜಿಗಿಯಬಲ್ಲ ತಂಬಾಕು ಪದಾರ್ಥಗಳನ್ನು ಒಂದು ವರ್ಷಗಳ ಕಾಲ ನಿಷೇಧಿಸಿ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ ಆದೇಶಿಸಿದೆ.