ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನ 10 ಕಾರ್ಮಿಕರನ್ನು ವಿಮಾನದಲ್ಲಿ ತವರಿಗೆ ಕಳುಹಿಸಿಕೊಟ್ಟ ರೈತ

|
Google Oneindia Kannada News

ನವದೆಹಲಿ, ಮೇ 28: ಲಾಕ್‌ಡೌನ್‌ನಿಂದಾಗಿ ದೊಡ್ಡ ದೊಡ್ಡ ಕಂಪನಿಗಳು ನೌಕರರ ವೇತನ ಕಡಿತಗೊಳಿಸುತ್ತಿದ್ದರೆ , ದೆಹಲಿಯ ರೈತನೊಬ್ಬ ತನ್ನ ಬಳಿ ಕೆಲಸ ಮಾಡುತ್ತಿದ್ದ 10 ಮಂದಿ ಕಾರ್ಮಿಕರನ್ನು ವಿಮಾನದ ಮೂಲಕ ಕಳುಹಿಸಿಕೊಟ್ಟಿದ್ದಾರೆ.

Recommended Video

ಸತ್ತ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸಿದ ಮಗು ವಿಡಿಯೋ ವೈರಲ್ | Oneindia Kannada

ಈ ಕಾರ್ಮಿಕರು ಬಸ್‌ನಲ್ಲಾಗಲಿ, ನಡೆದುಕೊಂಡಾಗಲಿ, ಸೈಕಲ್, ರೈಲಿನಲ್ಲಾಗಲಿ ತೆರಳಿಲ್ಲ ಬದಲಾಗಿ ವಿಮಾನದಲ್ಲಿ ತೆರಳಿದ್ದಾರೆ.ಎರಡು ತಿಂಗಳಿನಿಂದ ತವರಿಗೆ ಮರಳಲಾಗದೆ ಪರಿತಪಿಸುತ್ತಿದ್ದ ಬಿಹಾರದ ಕಾರ್ಮಿಕರ ಆಸೆ ಈಡೇರಿದಂತಾಗಿದೆ. ಏಪ್ರಿಲ್‌ನಲ್ಲೇ ಊರು ಸೇರ ಬಯಸಿದ್ದ ಕಾರ್ಮಿಕರು ಇದೀಗ ಗುರುವಾರ ಬೆಳಗ್ಗೆ 6 ಗಂಟೆಗೆ ವಿಮಾನದ ಮೂಲಕ ಊರು ಸೇರಿದ್ದಾರೆ.

ಮೊದಲ ದಿನದ ವಿಮಾನ ಹಾರಾಟ: ಚೆನ್ನೈ ಪ್ರಯಾಣಿಕನಿಗೆ ಕೊರೊನಾ ಸೋಂಕು ಮೊದಲ ದಿನದ ವಿಮಾನ ಹಾರಾಟ: ಚೆನ್ನೈ ಪ್ರಯಾಣಿಕನಿಗೆ ಕೊರೊನಾ ಸೋಂಕು

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕರ ಲಖೀಂದರ್ ರಾಮ್ , ನಾವು ಕನಸು ಮನಸಿನಲ್ಲೂ ವಿಮಾನದಲ್ಲಿ ಪ್ರಯಾಣಿಸುತ್ತೇವೆ ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

Delhi Farmer Buys Plane Tickets To Send His 10 Workers Home To Bihar

ದೆಹಲಿಯ ಮಶ್ರೂಮ್ ಬೆಳೆಯುವ ರೈತ ಪಪ್ಪನ್ ಸಿಂಗ್ ಈ ಕಾರ್ಮಿಕರಿಗೆ ಸಹಾಯ ಮಾಡಿದವರು. ಎಷ್ಟೋ ಮಂದಿ ಕಾರ್ಮಿಕರು ನಡೆದುಕೊಂಡು, ಸೈಕಲ್‌ನಲ್ಲಿ ಹೋಗಿ ಅರ್ಧ ದಾರಿಯಲ್ಲೇ ಮೃತಪಟ್ಟಿದ್ದಾರೆ. ಇವುಗಳ ಮಧ್ಯೆ ಈ ರೈತನ ಸಹಾಯ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಯಾಣಿಕರ ಸ್ವಾಗತಕ್ಕೆ ಸಿದ್ಧವಾದ ಬೆಂಗಳೂರು ವಿಮಾನ ನಿಲ್ದಾಣಪ್ರಯಾಣಿಕರ ಸ್ವಾಗತಕ್ಕೆ ಸಿದ್ಧವಾದ ಬೆಂಗಳೂರು ವಿಮಾನ ನಿಲ್ದಾಣ

ಲಖಿಂದರ್ ಪಪ್ಪನ್ ಸಿಂಗ್ ಅವರ ಜಮೀನಿನಲ್ಲಿ 27 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 25ರವರೆಗೂ ಪಪ್ಪನ್ ಸಿಂಗ್ ಅವರು ಈ ಎಲ್ಲಾ ಕಾರ್ಮಿಕರ ಯೋಗಕ್ಷೇಮ, ಆಹಾರವನ್ನು ನೋಡಿಕೊಳ್ಳುತ್ತಿದ್ದರು. ಕಾರ್ಮಿಕರ ಟಿಕೆಟ್‌ಗಾಗಿ 68 ಸಾವಿರ ರೂ ಖರ್ಚಿ ಮಾಡಿದ್ದಲ್ಲದೆ, ಪ್ರತಿಯೊಬ್ಬರಿಗೂ 3 ಸಾವಿರ ರೂ.ನಗದು ಹಣವನ್ನು ಕೊಟ್ಟು ಕಳುಹಿಸಿದ್ದಾರೆ.

English summary
Their dreams of returning home finally taking wing after two months of lockdown, 10 migrant workers are flying to Bihar thanks to their employer, a Delhi farmer, who bought their plane tickets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X