ತನ್ನ 10 ಕಾರ್ಮಿಕರನ್ನು ವಿಮಾನದಲ್ಲಿ ತವರಿಗೆ ಕಳುಹಿಸಿಕೊಟ್ಟ ರೈತ
ನವದೆಹಲಿ, ಮೇ 28: ಲಾಕ್ಡೌನ್ನಿಂದಾಗಿ ದೊಡ್ಡ ದೊಡ್ಡ ಕಂಪನಿಗಳು ನೌಕರರ ವೇತನ ಕಡಿತಗೊಳಿಸುತ್ತಿದ್ದರೆ , ದೆಹಲಿಯ ರೈತನೊಬ್ಬ ತನ್ನ ಬಳಿ ಕೆಲಸ ಮಾಡುತ್ತಿದ್ದ 10 ಮಂದಿ ಕಾರ್ಮಿಕರನ್ನು ವಿಮಾನದ ಮೂಲಕ ಕಳುಹಿಸಿಕೊಟ್ಟಿದ್ದಾರೆ.
Recommended Video
ಈ ಕಾರ್ಮಿಕರು ಬಸ್ನಲ್ಲಾಗಲಿ, ನಡೆದುಕೊಂಡಾಗಲಿ, ಸೈಕಲ್, ರೈಲಿನಲ್ಲಾಗಲಿ ತೆರಳಿಲ್ಲ ಬದಲಾಗಿ ವಿಮಾನದಲ್ಲಿ ತೆರಳಿದ್ದಾರೆ.ಎರಡು ತಿಂಗಳಿನಿಂದ ತವರಿಗೆ ಮರಳಲಾಗದೆ ಪರಿತಪಿಸುತ್ತಿದ್ದ ಬಿಹಾರದ ಕಾರ್ಮಿಕರ ಆಸೆ ಈಡೇರಿದಂತಾಗಿದೆ. ಏಪ್ರಿಲ್ನಲ್ಲೇ ಊರು ಸೇರ ಬಯಸಿದ್ದ ಕಾರ್ಮಿಕರು ಇದೀಗ ಗುರುವಾರ ಬೆಳಗ್ಗೆ 6 ಗಂಟೆಗೆ ವಿಮಾನದ ಮೂಲಕ ಊರು ಸೇರಿದ್ದಾರೆ.
ಮೊದಲ ದಿನದ ವಿಮಾನ ಹಾರಾಟ: ಚೆನ್ನೈ ಪ್ರಯಾಣಿಕನಿಗೆ ಕೊರೊನಾ ಸೋಂಕು
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕರ ಲಖೀಂದರ್ ರಾಮ್ , ನಾವು ಕನಸು ಮನಸಿನಲ್ಲೂ ವಿಮಾನದಲ್ಲಿ ಪ್ರಯಾಣಿಸುತ್ತೇವೆ ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ದೆಹಲಿಯ ಮಶ್ರೂಮ್ ಬೆಳೆಯುವ ರೈತ ಪಪ್ಪನ್ ಸಿಂಗ್ ಈ ಕಾರ್ಮಿಕರಿಗೆ ಸಹಾಯ ಮಾಡಿದವರು. ಎಷ್ಟೋ ಮಂದಿ ಕಾರ್ಮಿಕರು ನಡೆದುಕೊಂಡು, ಸೈಕಲ್ನಲ್ಲಿ ಹೋಗಿ ಅರ್ಧ ದಾರಿಯಲ್ಲೇ ಮೃತಪಟ್ಟಿದ್ದಾರೆ. ಇವುಗಳ ಮಧ್ಯೆ ಈ ರೈತನ ಸಹಾಯ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಯಾಣಿಕರ ಸ್ವಾಗತಕ್ಕೆ ಸಿದ್ಧವಾದ ಬೆಂಗಳೂರು ವಿಮಾನ ನಿಲ್ದಾಣ
ಲಖಿಂದರ್ ಪಪ್ಪನ್ ಸಿಂಗ್ ಅವರ ಜಮೀನಿನಲ್ಲಿ 27 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 25ರವರೆಗೂ ಪಪ್ಪನ್ ಸಿಂಗ್ ಅವರು ಈ ಎಲ್ಲಾ ಕಾರ್ಮಿಕರ ಯೋಗಕ್ಷೇಮ, ಆಹಾರವನ್ನು ನೋಡಿಕೊಳ್ಳುತ್ತಿದ್ದರು. ಕಾರ್ಮಿಕರ ಟಿಕೆಟ್ಗಾಗಿ 68 ಸಾವಿರ ರೂ ಖರ್ಚಿ ಮಾಡಿದ್ದಲ್ಲದೆ, ಪ್ರತಿಯೊಬ್ಬರಿಗೂ 3 ಸಾವಿರ ರೂ.ನಗದು ಹಣವನ್ನು ಕೊಟ್ಟು ಕಳುಹಿಸಿದ್ದಾರೆ.