ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿವಾಲ್ ಧರಣಿಯನ್ನು ಗೇಲಿ ಮಾಡಿದ ಬಿಜೆಪಿ

By Mahesh
|
Google Oneindia Kannada News

ನವದೆಹಲಿ, ಜೂನ್ 13: ಲೆಫ್ಟಿನೆಂಟ್‌‌ ಗವರ್ನರ್‌‌ ನಡೆ ಖಂಡಿಸಿ, ಕಚೇರಿಯಲ್ಲೇ ಸಿಎಂ ಕೇಜ್ರಿವಾಲ್‌ ಮತ್ತು ತಂಡ, ಪ್ರತಿಭಟನೆ ನಡೆಸುತ್ತಿರುವುದು ದೊಡ್ಡ ನಾಟಕ, ಪ್ರಜಾಪ್ರಭುತ್ವದ ಅಣಕು ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಪ್ರತಿಕ್ರಿಯಿಸಿದ್ದಾರೆ.

ಮೂರು ಬೇಡಿಕೆಗಳನ್ನಿಟ್ಟುಕೊಂಡು ಸಿಎಂ ಕೇಜ್ರಿವಾಲ್‌, ಡಿಸಿಎಂ ಮನೀಶ್‌ ಸಿಸೋಡಿಯಾ ಮತ್ತಿಬ್ಬರು ಸಚಿವರು, ಲೆಫ್ಟಿನೆಂಟ್‌‌ ಗವರ್ನರ್‌‌ ಅನಿಲ್‌ ಬೈಜಲ್‌ ಅವರ ಭೇಟಿಗೆ ತೆರಳಿದ್ದರು.

ಕೇಜ್ರಿವಾಲ್ ಬಿಜೆಪಿ ಬೆಂಬಲಿಸುತ್ತಾರಂತೆ, ಆದರೆ ಷರತ್ತುಗಳು ಅನ್ವಯಕೇಜ್ರಿವಾಲ್ ಬಿಜೆಪಿ ಬೆಂಬಲಿಸುತ್ತಾರಂತೆ, ಆದರೆ ಷರತ್ತುಗಳು ಅನ್ವಯ

ನಾಲ್ಕು ತಿಂಗಳಿಂದ ಕೆಲಸ ಮಾಡದೆ ಪ್ರತಿಭಟನೆಯಲ್ಲಿ ತೊಡಗಿರುವ ಐಎಎಸ್‌‌ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು. ಆದರೆ, ಲೆಫ್ಟಿನೆಂಟ್‌‌ ಗವರ್ನರ್‌‌ ಅನಿಲ್‌ ಬೈಜಲ್‌, ಐಎಎಸ್‌‌ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ನಿರಾಕರಿಸಿದ್ದರು.

Delhi BJP dubs Kejriwals dharna at L-G office as mockery of democracy

ಕಳೆದ ಮೂರು ದಿನಗಳಿಂದ ಅರವಿಂದ್ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ಮನೀಸ್‌ ಸಿಸೋಡಿಯಾ, ಸಚಿವರಾದ ಸತ್ಯೇಂದ್ರ ಜೈನ್, ಗೋಪಾಲ್ ರೈ ಪ್ರತಿಭಟನೆ ನಡೆಸಿದ್ದು, ಈಗ ಉಪವಾಸ ಸತ್ಯಾಗ್ರಹ ಶುರು ಮಾಡಿದ್ದಾರೆ. ಈ ಹಿಂದೆ ಕೂಡ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರ ಮತ್ತು ಆಗಿನ ಲೆಫ್ಟಿನೆಂಟ್‌‌ ಗವರ್ನರ್‌‌ ನಜೀಬ್‌ ಜಂಗ್‌ ಅವರ ಮಧ್ಯೆ ಕೂಡ ತೀವ್ರ ತಿಕ್ಕಾಟ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

2013 ಹಾಗೂ 2015ರಲ್ಲಿ ಭ್ರಮೆ ಸೃಷ್ಟಿಸಿ ಜನರ ಒಲುವು ಗಳಿಸಿದ ಎಎಪಿ, ಈಗ ಪ್ರತ್ಯೇಕ ರಾಜ್ಯದ ಸ್ಥಾನ ಮಾನದ ವಿಷಯವನ್ನು ದೊಡ್ಡದು ಮಾಡಿ 2019ರ ಲೋಕಸಭೆ ಚುನಾವಣೆ ಎದುರಿಸಲು ಮುಂದಾಗಿದೆ. ಎಎಪಿ ವಿರುದ್ಧ ಬಿಜೆಪಿ ಶಾಸಕರು ಹಾಗೂ ಸಂಸದರು ಪ್ರತಿಭಟನೆ ನಡೆಸುತ್ತೇವೆ ಎಂದು ತಿವಾರಿ ಹೇಳಿದರು.

English summary
Delhi BJP leaders termed Chief Minister Arvind Kejriwal and his cabinet colleagues' sit in at the L-G office a "drama" and "mockery of democracy", and claimed that it was done keeping in mind the general elections next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X