ಕೊರೊನಾ ವೈರಸ್ ಗೆ ದೇಶದಲ್ಲಿ ಮತ್ತೊಂದು ಬಲಿ; ದೆಹಲಿ ಮಹಿಳೆ ಸಾವು
ನವದೆಹಲಿ,
ಮಾರ್ಚ್
13:
ವಿಶ್ವವನ್ನೇ
ಬೆಚ್ಚಿ
ಬೀಳಿಸಿರುವ
ಮಾರಕ
ಕೊರೊನಾ
ವೈರಸ್
ಗೆ
ಭಾರತದಲ್ಲಿ
ಮೃತಪಟ್ಟವರ
ಸಂಖ್ಯೆ
ಎರಡಕ್ಕೆ
ಏರಿಕೆಯಾಗಿದೆ.
ರಾಷ್ಟ್ರ
ರಾಜಧಾನಿ
ದೆಹಲಿಯಲ್ಲಿ
68
ವರ್ಷದ
ವೃದ್ಧೆಯೊಬ್ಬರು
ಮಾರಕ
ಸೋಂಕಿನಿಂದ
ಪ್ರಾಣ
ಬಿಟ್ಟಿದ್ದಾರೆ.
ಶುಕ್ರವಾರ
ರಾತ್ರಿ
ನವದೆಹಲಿಯ
ರಾಮ್
ಮನೋಹರ್
ಲೋಹಿಯಾ
ಆಸ್ಪತ್ರೆಯಲ್ಲಿ
ಶಂಕಿತ
ಕೊರೊನಾ
ವೈರಸ್
ಸೋಂಕು
ತಗಲಿರುವ
ಹಿನ್ನೆಲೆಯಲ್ಲಿ
ದಾಖಲಾಗಿದ್ದ
ವೃದ್ಧೆ
ಚಿಕಿತ್ಸೆ
ಫಲಿಸದೇ
ಸಾವನ್ನಪ್ಪಿದ್ದಾರೆ.
ದೇಶದಲ್ಲಿ
ಕೊರೊನಾ
ವೈರಸ್
ಗೆ
ಬಲಿಯಾದವರ
ಸಂಖ್ಯೆ
ಎರಡಕ್ಕೆ
ಏರಿಕೆಯಾಗಿದೆ.
ಇದುವರೆಗೂ
ಭಾರತದಲ್ಲಿ
82
ಮಂದಿಗೆ
ಕೊರೊನಾ
ವೈರಸ್
ಇರುವುದು
ಸ್ಪಷ್ಟವಾಗಿದೆ
ಎಂದು
ಕೇಂದ್ರ
ಆರೋಗ್ಯ
ಸಚಿವಾಲಯವು
ಸ್ಪಷ್ಟಪಡಿಸಿದೆ.
ದೆಹಲಿಯಲ್ಲಿ
ಕೊರೊನಾ
ವೈರಸ್
ನಿಂದ
ಪ್ರಾಣ
ಬಿಟ್ಟಿರುವ
68
ವರ್ಷದ
ವೃದ್ಧೆಗೆ
ಸಕ್ಕರೆ
ಕಾಯಿಲೆ
ಮತ್ತು
ಹೈಪರ್
ಟೆನ್ಷನ್
ನಿಂದ
ಕೂಡಾ
ಬಳಲುತ್ತಿದ್ದರು
ಎಂದು
ವೈದ್ಯರು
ಮಾಹಿತಿ
ನೀಡಿದ್ದಾರೆ.
ದೆಹಲಿಯಲ್ಲಿ
ಇದುವರೆಗೂ
6
ಮಂದಿ
ಕೊರೊನಾ
ವೈರಸ್
ಸೋಂಕಿತರು
ಇರುವುದಾಗಿ
ತಿಳಿದು
ಬಂದಿದೆ.
ಕರ್ನಾಟಕದ
ಕಲಬುರಗಿಯಲ್ಲಿ
ಗುರುವಾರವಷ್ಟೇ
76
ವರ್ಷದ
ಮಹ್ಮದ್
ಹುಸೇನ್
ಸಿದ್ದಿಕಿ
ಮಾರಕ
ಕೊರೊನಾ
ವೈರಸ್
ನಿಂದ
ಪ್ರಾಣ
ಬಿಟ್ಟಿದ್ದರು.
ಇದರ
ಬೆನ್ನಲ್ಲೇ
ರಾಜ್ಯದಲ್ಲಿ
ಸಿಎಂ
ಬಿ.ಎಸ್.ಯಡಿಯೂರಪ್ಪ
ತುರ್ತು
ಪರಿಸ್ಥಿತಿ
ಘೋಷಿಸಿದ್ದರು.
ಕರ್ನಾಟಕದಲ್ಲಿ
ಮುಂದಿನ
ಒಂದು
ವಾರಗಳ
ಕಾಲ
ಪಬ್,
ಕ್ಲಬ್,
ಮಾಲ್,
ಸಿನಿಮಾ
ಥಿಯೇಟರ್,
ಶಾಲಾ-ಕಾಲೇಜುಗಳಿಗೆ
ರಜೆ
ಘೋಷಿಸಲಾಗಿತ್ತು.