ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಡಿಗೆದಾರರಿಗೆ ಸಿಹಿ ಸುದ್ದಿ ಕೊಟ್ಟ ದೆಹಲಿ ಸರ್ಕಾರ.!

|
Google Oneindia Kannada News

ನವದೆಹಲಿ, ಮಾರ್ಚ್ 30: ದೆಹಲಿ ಬಾಡಿಗೆದಾರರು ಮೂರು ತಿಂಗಳ ಅವಧಿಯಲ್ಲಿ ಬಾಡಿಗೆ ಕಟ್ಟುವಲ್ಲಿ ವಿಫಲವಾದರೆ, ಸರ್ಕಾರ ಅದನ್ನು ಭರಿಸುತ್ತದೆ ಎಂಬ ಮಹತ್ವದ ಘೋಷಣೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಡಿದ್ದಾರೆ.

Recommended Video

ಒಂದು ವಾರದಿಂದ ಒಬ್ಬರೂ ದೇವರ ದರ್ಶನಕ್ಕೆ ಬಂದಿಲ್ಲ | Veerendra Hedge | Dharmastala

ಈ ಬಗ್ಗೆ ಡಿಜಿಟಲ್ ಪ್ರೆಸ್ ಕಾನ್ಫರೆನ್ಸ್ ನಡೆಸಿದ ಅರವಿಂದ್ ಕೇಜ್ರಿವಾಲ್, ''ಎರಡ್ಮೂರು ತಿಂಗಳ ಕಾಲ ಬಾಡಿಗೆ ನೀಡುವಂತೆ ಬಾಡಿಗೆದಾರರಿಗೆ ಲ್ಯಾಂಡ್ ಲಾರ್ಡ್ ಗಳು ಒತ್ತಾಯಿಸಬಾರದು. ಬಾಡಿಗೆ ಪಡೆಯುವುದನ್ನು ಕೆಲವು ತಿಂಗಳುಗಳ ಮಟ್ಟಿಗೆ ಮುಂದೂಡಬೇಕು. ಪರಿಸ್ಥಿತಿ ಸರಿಯಾದ ಬಳಿಕ ಬಾಡಿಗೆ ಕಟ್ಟಲು ಯಾರಾದರೂ ವಿಫಲವಾದರೆ, ಸರ್ಕಾರ ಅದನ್ನು ಭರಿಸುತ್ತದೆ. ಒಂದು ವೇಳೆ ಲ್ಯಾಂಡ್ ಲಾರ್ಡ್ ಗಳು ಒತ್ತಡ ಹಾಕಿದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು'' ಎಂದು ಹೇಳಿದರು.

14 ದಿನ ಐಸೊಲೇಷನ್ ನಲ್ಲಿದ್ದ ದೆಹಲಿಯ ಕೊರೊನಾ ಪೀಡಿತ ಏನೇನೆಲ್ಲಾ ಮಾಡಿದ್ದ ಗೊತ್ತಾ?14 ದಿನ ಐಸೊಲೇಷನ್ ನಲ್ಲಿದ್ದ ದೆಹಲಿಯ ಕೊರೊನಾ ಪೀಡಿತ ಏನೇನೆಲ್ಲಾ ಮಾಡಿದ್ದ ಗೊತ್ತಾ?

ಇದೇ ವೇಳೆ ಉದ್ಯಮಿಗಳು ಹಾಗೂ ಭೂಮಾಲೀಕರಿಗೆ ಮನವಿ ಮಾಡಿದ ಅರವಿಂದ್ ಕೇಜ್ರಿವಾಲ್, ''ಸಂಕಷ್ಟದ ಸಮಯವನ್ನು ಅರಿತು ನಡೆಯಿರಿ. ನಿಮ್ಮನ್ನ ಅವಲಂಬಿಸಿದವರಿಗೆ ಸಹಾಯವಾಗುವ ರೀತಿ ನಡೆದುಕೊಳ್ಳಿ. ಹಸಿವು ಮತ್ತು ಆರ್ಥಿಕ ಸಂಕಷ್ಟದಿಂದ ಬಳಲದಂತೆ ನೋಡಿಕೊಳ್ಳಿ'' ಎಂದರು.

Coronavirus Scare: Good news for Tenants from Delhi Government

ಹಸಿವಿನಿಂದ ಬಳಲುವವರ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ದೆಹಲಿ ಸರ್ಕಾರ 568 ರಿಲೀಫ್ ಸೆಂಟರ್ ಮತ್ತು 239 ನಿರಾಶ್ರಿತ ತಾಣಗಳನ್ನು ತೆರೆದಿದೆ.

English summary
Coronavirus Scare: Good news for Tenants from Delhi Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X