ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕಳಂಕಿತ ರಾಜೀನಾಮೆ ನಾವು ಕೇಳುತ್ತಿಲ್ಲ, ದೇಶವೇ ಆಗ್ರಹಿಸುತ್ತಿದೆ"

By Mahesh
|
Google Oneindia Kannada News

12:16:36ನವದೆಹಲಿ, ಆಗಸ್ಟ್ 04: ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಕರ್ನಾಟಕದ ಸಂಸದರು ಸೇರಿ 25 ಜನ ಕಾಂಗ್ರೆಸ್ ಸಂಸದರನ್ನು 5 ದಿನದ ಮಟ್ಟಿಗೆ ಅಮಾನತುಗೊಂಡಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಂಸತ್ತಿನ ಬಳಿ ಮಹಾತ್ಮಾ ಗಾಂಧೀಜಿ ಪ್ರತಿಮೆ ಬಳಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಲೋಕಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಮಾನತುಗೊಂಡ ಸಂಸದರು ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ 44 ಜನ ಸಂಸದರನ್ನು ಹೊಂದಿದೆ. [ಕೆಎ‌ಚ್ ಮುನಿಯಪ್ಪ ಸೇರಿ 27 ಸಂಸದರು ಅಮಾನತು]

ಸುಷ್ಮಾ ಸ್ವರಾಜ್, ವಸುಂಧರಾ ರಾಜೇ ಹಾಗೂ ಎಚ್ ಆರ್ ಡಿ ಸಚಿವೆ ಸ್ಮೃತಿ ಇರಾನಿ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸುತ್ತಾ ಬಂದಿವೆ. ಇದು ಕಾಂಗ್ರೆಸ್ ಪಕ್ಷದ ಆಗ್ರಹ ಮಾತ್ರವಲ್ಲ ಇಡೀ ದೇಶದ ಆಗ್ರಹವಾಗಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸೋಮವಾರ ಕೈಗೊಂಡ ಕ್ರಮ, 25 ಸಂಸದರನ್ನು ಅಮಾನತುಗೊಳಿಸಿದ್ದು, ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ - ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ.

ಎನ್ ಡಿಎ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಎನ್ ಡಿಎ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಕಾಂಗ್ರೆಸ್ ಪಕ್ಷದ ಪ್ರತಿಭಟನೆಗೆ ಆರ್ ಜೆಡಿ, ಎನ್ ಸಿಪಿ, ಸಮಾಜವಾದಿ ಪಕ್ಷದಿಂದ ಬೆಂಬಲ ವ್ಯಕ್ತವಾಗಿದೆ. ಈ ನಡುವೆ ರಾಜ್ಯಸಭೆಯಲ್ಲೂ ವಿಪಕ್ಷಗಳ ಗದ್ದಲ ಹೆಚ್ಚಾಗಿದ್ದರಿಂದ ಮಧ್ಯಾಹ್ನ 2 ಗಂಟೆ ತನಕ ಕಲಾಪವನ್ನು ಮುಂದೂಡಲಾಗಿದೆ.

ಅಮಾನತುಗೊಂಡವರು ಸಂಕೇತವಾಗಿದ್ದಾರೆ

ಅಮಾನತುಗೊಂಡವರು ಸಂಕೇತವಾಗಿದ್ದಾರೆ ನಮ್ಮ ಹೋರಾಟಕ್ಕೆ ಬಲ ತಂದಿದ್ದಾರೆ. ಇಡೀ ದೇಶದ ರೈತರು, ವಿದ್ಯಾರ್ಥಿಗಳು ಇನ್ನು ನಮ್ಮ ಜೊತೆ ಕೈಜೋಡಿಸಬೇಕಿದೆ: ರಾಹುಲ್ ಗಾಂಧಿ.

ವ್ಯಾಪಂ ಹಗರಣದಿಂದ ಅನೇಕ ಜನ ನಿರ್ಗತಿಕರಾಗಿದ್ದಾರೆ

ವ್ಯಾಪಂ ಹಗರಣದಿಂದ ಅನೇಕ ಜನ ನಿರ್ಗತಿಕರಾಗಿದ್ದಾರೆ. ಲಲಿತ್ ಗೇಟ್ ನಿಮಗೆ ಗೊತ್ತೇ ಇದೆ. ಸುಷ್ಮಾ ಸ್ವರಾಜ್ ಅವರು ಕಾನೂನು ಮುರಿದಿದ್ದಾರೆ. ಲಲಿತ್ ಮೋದಿ ಜೊತೆ ರಾಜಸ್ಥಾನ್ ಸಿಎಂ ಆರ್ಥಿಕ ವ್ಯವಹಾರ ಇಟ್ಟುಕೊಂಡಿದ್ದಾರೆ.

ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಿರತ ಕಾಂಗ್ರೆಸ್ಸಿಗರು

ಸಂಸತ್ತಿನ ಬಳಿ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಿರತ ಕಾಂಗ್ರೆಸ್ಸಿಗರು.

ಕಾಂಗ್ರೆಸ್ ಪ್ರತಿಭಟನೆ ನಗೆ ತರಿಸುತ್ತಿದೆ: ಬಿಜೆಪಿ

ಕಾಂಗ್ರೆಸ್ ಪ್ರತಿಭಟನೆ ನಗೆ ತರಿಸುತ್ತಿದೆ, ಮೊದಲು ಅಮ್ಮ ಅಪ್ಪನ ಸಾಯಿಸಿಬಿಟ್ಟು ಅನಾಥ ನಾದೆ ಎಂದು ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇದೆ: ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ

ಅಮಾನತ್ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು

ಅಮಾನತ್ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು, ಇಲ್ಲಿದೆ ವಿಡಿಯೋ

English summary
On Monday(Aug 03) 25 Congress MPs were suspended from Lok Sabha for five consecutive days by the Speaker. An enraged Congress announced that all its members would boycott the Lok Sabha for the next five days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X