ಕೇಂದ್ರ ಸರ್ಕಾರದ ಲಸಿಕೆ ನೀತಿಗೆ ಕಾಂಗ್ರೆಸ್ ಮತ್ತೆ ವಾಗ್ದಾಳಿ
ನವದೆಹಲಿ, ಮೇ 18: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೊರೊನಾ ಲಸಿಕೆ ನೀತಿಯ ವಿರುದ್ಧ ಕಾಂಗ್ರೆಸ್ ಮತ್ತೊಮ್ಮೆ ವಾಗ್ದಾಳಿಯನ್ನು ನಡೆಸಿದೆ. ಭಾರತದ ಜನರ ಬದುಕಿನ ಹಣದಲ್ಲಿ ಸರ್ಕಾರ ಸುಳ್ಳು ರೂಪವನ್ನು ನಿರ್ಮಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪವನ್ನು ಮಾಡಿದೆ.
ಪಂಜಾಬ್ನ ಶ್ರೀ ಆನಂದ್ಪುರ್ ಸಾಹಿಬ್ನ ಸಂಸದ ಮನೀಶ್ ತಿವಾರಿ ಟ್ವಿಟ್ಟರ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಈ ಮಾತುಗಳನ್ನು ಆಡಿದ್ದಾರೆ. ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ತಿರುಮೂರ್ತಿ ವಿಶ್ವಸಂಸ್ಥೆಯಲ್ಲಿ ಆಡಿದ ಮಾತಿನ ವಿಡಿಯೋವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ತಿರುಮೂರ್ತಿ ಮಾತನಾಡುತ್ತಾ "ಭಾರತ ತನ್ನ ಸ್ವಂತ ಜನರಿಗೆ ನೀಡಿದ ಲಸಿಕೆಗಿಂತ ಹೆಚ್ಚಿನ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಿದೆ" ಎಂದು ವಿವರಿಸಿದ್ದರು. ಈ ವಿಡಿಯೋ ತುಣುಕಿನೊಂದಿಗೆ ಮನೀಶ್ ತಿವಾರಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ವಾಗ್ದಾಳಿಯನ್ನು ನಡೆಸಿದ್ದಾರೆ.
Do watch 👇🏾India’s Permanent Representative to UN @ambstirumurti state that India has exported more vaccine than inoculated it’s own people
— Manish Tewari (@ManishTewari) May 18, 2021
I had warned @DrSJaishankar in Lok Sabha on his face
Do not build NDA/BJP Govt’s false image at the cost of Indian lives.@IndiaUNNewYork pic.twitter.com/l5GXl8crBI
ಇದರ ಜೊತೆಗೆ ಮನೀಶ್ ತಿವಾರಿ ಈ ಬಗ್ಗೆ ಲೋಕಸಭೆಯಲ್ಲಿ ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರಿಗೆ ನಾನು ಎಚ್ಚರಿಕೆಯನ್ನು ಕೂಡ ನೀಡಿದ್ದೆ ಎಂದು ಈ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ದೇಶದ ಬಹುತೇಕ ರಾಜ್ಯಗಳಲ್ಲಿ ಕೊರೊನಾ ವೈರಸ್ನ ಲಸಿಕೆಯ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ಈ ಕಾರಣದಿಂದಾಗಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಸತತ ವಾಗ್ದಾಳಿಯನ್ನು ನಡೆಸುತ್ತಿದೆ.