ಮಸೂದ್ ಉಗ್ರ ಪಟ್ಟದ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾದ ಕಾಂಗ್ರೆಸ್
ನವದೆಹಲಿ, ಮೇ 2: ಉಗ್ರ ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಪಟ್ಟಕ್ಕೆ ಸೇರಿಸಿರುವ ವಿಶ್ವಸಂಸ್ಥೆಯ ನಿರ್ಧಾರದಲ್ಲಿ ರಾಜಕೀಯ ಮಾಡಲು ಕಾಂಗ್ರೆಸ್ ಮುಂದಾಗಿದೆ.
26/11 ಮುಂಬೈ ಭಯೋತ್ಪಾದಕ ದಾಳಿ ಬಳಿಕ ಅಜರ್ನನ್ನು ಉಗ್ರ ಪಟ್ಟಕ್ಕೇರಿಸಲು ಪ್ರಯತ್ನ ಆರಂಭಿಸಲಾಗಿತ್ತು, ಜಾಗತಿಕವಾಗಿ ಮಸೂದ್ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಲು ಯುಪಿಎ ಸರ್ಕಾರ ಒತ್ತಾಯಿಸಿತ್ತು ಆದರೆ ನರೇಂದ್ರ ಮೋದಿ ಸರ್ಕಾರ ಇನ್ನಷ್ಟು ಒತ್ತಡ ಹೇರಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ವಿಳಂಬ ಮಾಡಿದೆ.
ಮಸೂದ್ ಅಜರ್ ಜಾಗತಿಕ ಉಗ್ರ ಪಟ್ಟಕ್ಕೆ ಪಾಕ್ ಪ್ರತಿಕ್ರಿಯೆ ಏನು?
10 ವರ್ಷವಾದಬಳಿಕವಾದರೂ ಉಗ್ರ ಪಟ್ಟಕ್ಕೆ ಸೇರಿಸಲಾಗಿದೆ ಎಂದು ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಕೊಂಕು ಮಾತನ್ನಾಡಿದ್ದಾರೆ.
ಇದೀಗ ಪಾಕಿಸ್ತಾನ ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸುತ್ತಿದ್ದ ಚೀನಾ ತನ್ನ ಹೇಳಿಕೆಯಿಂದ ಹಿಂದೆ ಸರಿದಿದೆ. ಹಾಗಾಗಿ ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ.
ಮಸೂದ್ ಅಜರ್ ಕೈವಾಡವಿದೆ ಎನ್ನಲಾಗಿದ್ದ ಪುಲ್ವಾಮಾ ದಾಳಿ ಬಳಿಕ, ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಏಪ್ರಿಲ್ನಲ್ಲಿ ಬೀಜಿಂಗ್ಗೆ ತೆರಳಿದ್ದಾಗ, ಮಸೂದ್ ಅಜರ್ ವಿವಿಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ಸಾಕ್ಷ್ಯ ಒದಗಿಸಿದ್ದರು.