ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ, ಕೇಜ್ರಿವಾಲ್ ವಿರುದ್ಧ ದೂರು
ನವದೆಹಲಿ, ಮಾರ್ಚ್ 23: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ದೂರು ನೀಡಲಾಗಿದೆ.
ಸುಪ್ರಿಂ ಕೋರ್ಟ್ ವಕೀಲ ಅಲಕ್ ಅಲೋಕ್ ಶ್ರೀವತ್ಸ ದೂರು ನೀಡಿದ್ದು, ಅರವಿಂದ ಕೇಜ್ರಿವಾಲ್ ಅವರು, ಟ್ವಿಟ್ಟರ್ನಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹಾ ಚಿತ್ರವನ್ನು ಹಂಚಿಕೊಂಡಿರುವುದಾಗಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರು ಟ್ವಿಟ್ಟರ್ನಲ್ಲಿ ಕೆಲ ದಿನದ ಹಿಂದೆ ಪೊರಕೆ ಹಿಡಿದ ವ್ಯಕ್ತಿಯೊಬ್ಬ ಹಿಂದೂಗಳ ಧಾರ್ಮಿಕ ಗುರುತೆಂದು ಹೇಳಲಾಗುವ ಸ್ವಸ್ಥಿಕ್ ಚಿಹ್ನೆಯನ್ನು ಹೊಡೆಯಲು ಓಡುತ್ತಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಮಾರ್ಚ್ 20 ರಂದು ಕೇಜ್ರಿವಾಲ್ ಅವರು ಈ ಚಿತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ದೆಹಲಿ: 'ಪೊರಕೆ' ಹಿಡಿಯಲು ಹೋದ 'ಕೈ'ಗೆ ಮುಖಭಂಗ, ಎಎಪಿ ಸೆಡ್ಡು
ಪೊರಕೆಯಿಂದ ಹಿಂದೂಗಳ ಧಾರ್ಮಿಕ ಚಿಹ್ನೆಯನ್ನು ಹೊಡೆಯುತ್ತಿರುವ ಆ ಚಿತ್ರ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂಬುದು ದೂರುದಾರರ ವಾದ.
ಮಕ್ಕಳು 'ಚೌಕಿದಾರ'ರಾಗಲು ಮೋದಿಗೆ ಮತ ಹಾಕಿ: ಕೇಜ್ರಿವಾಲ್