ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು : ಉತ್ತರ ಭಾರತಕ್ಕೆ ಚಳಿಯ ಕಾಟ

|
Google Oneindia Kannada News

ನವದೆಹಲಿ, ಡಿ. 28 : ರಾಷ್ಟ್ರ ರಾಜಧಾನಿ ನವ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಚಳಿಯ ಹೊಡೆತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ದಟ್ಟ ಮಂಜಿನಿಂದಾಗಿ ರೈಲು ಹಾಗೂ ವಿಮಾನ ಸಂಚಾರವೂ ವಿಳಂಬವಾಗುತ್ತಿದೆ. ಇಂದು ಶೀತ ಮಾರುತಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

ಇದುವರೆಗೂ ಚಳಿ ತಾಳಲಾರದೇ ಉತ್ತರ ಪ್ರದೇಶದಲ್ಲಿ 5, ಪಂಜಾಬ್‌ನಲ್ಲಿ ಇಬ್ಬರು ಸೇರಿ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನಿಷ್ಠ 4 ಡಿಗ್ರಿ ಹಾಗೂ ಗರಿಷ್ಠ 17 ಡಿಗ್ರಿ ಉಷ್ಣಾಂಶ ದಾಖಲಾಗಿದೆ. [ಉತ್ತರ ಭಾರತವನ್ನು ಆವರಿಸಿದ ಚಳಿಕಾಟ]

ಅತೀಯಾದ ಮಂಜಿನಿಂದಾಗಿ ಸಂಚಾರ ವ್ಯವಸ್ಥೆಗೆ ಧಕ್ಕೆ ಉಂಟಾಗಿದ್ದು 60 ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ಉತ್ತರ ಪ್ರದೇಶ, ಪಂಜಾಬ್‌, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಮುಂತಾದ ರಾಜ್ಯಗಳು ಚಳಿಯ ಹೊಡೆತಕ್ಕೆ ಸಿಲುಕಿವೆ. ಉತ್ತರ ಭಾರತದ ಚಳಿಯ ಚಿತ್ರಗಳು ಇಲ್ಲಿವೆ. [ಪಿಟಿಐ ಚಿತ್ರ]

ಯೋಧರ ತಾಲೀಮಿಗೆ ಚಳಿಯಿಲ್ಲ

ಯೋಧರ ತಾಲೀಮಿಗೆ ಚಳಿಯಿಲ್ಲ

ಗಣರಾಜ್ಯೋತ್ಸವದ ತಾಲೀಮು ನಡೆಸುತ್ತಿರುವ ಯೋಧರಿಗೆ ಚಳಿ ತಾಗಿಲ್ಲ. ಶನಿವಾರ ಚಳಿಯ ನಡುವೆಯೋ ಯೋಧರು ಹೆಜ್ಜೆ ಹಾಕುತ್ತಿದ್ದದ್ದು ಹೀಗೆ.

ದಟ್ಟ ಮಂಜು ಸಂಚಾರ ವ್ಯತ್ಯಯ

ದಟ್ಟ ಮಂಜು ಸಂಚಾರ ವ್ಯತ್ಯಯ

ದೆಹಲಿಯಲ್ಲಿ ಚಳಿಯ ಜೊತೆಗೆ ದಟ್ಟ ಮಂಜು ಆವರಿಸಿದ್ದ ಸಂಚಾರ ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ. ಮಂಜು ಮುಸುಕಿದ ರಸ್ತೆಯಲ್ಲಿ ಆಟೋ ಕಂಡಿದ್ದು ಹೀಗೆ.

ಜನರನ್ನು ಕಾಡುತ್ತಿರುವ ಚಳಿ

ಜನರನ್ನು ಕಾಡುತ್ತಿರುವ ಚಳಿ

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಚಳಿಯ ಹೊಡೆತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ ಜನರು ಕಂಡಿದ್ದು ಹೀಗೆ.

ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ ಚಳಿ

ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ ಚಳಿ

ನಾಗ್ಪುರದಲ್ಲಿ ದಟ್ಟ ಮಂಜು ಕವಿದಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಮಂಜು ಮುಸುಕಿದ ನಾಗ್ಪುರ ರಸ್ತೆ ಕಂಡಿದ್ದು ಹೀಗೆ.

ಅಬ್ಬಾ ಸ್ಪಲ್ಪ ಬೆಚ್ಚಾಗಾಯಿತು

ಅಬ್ಬಾ ಸ್ಪಲ್ಪ ಬೆಚ್ಚಾಗಾಯಿತು

ದೆಹಲಿಯಲ್ಲಿ ಭಾನುವಾರ ಮುಂಜಾಣೆ ರಸ್ತೆ ಬದಿ ವ್ಯಾಪಾರಿಗಳು ಬೆಂಕಿಗೆ ಕೈಯೊಡ್ಡಿ ಚಳಿಯಿಂದ ರಕ್ಷಣೆ ಪಡೆದರು.

ಕಾಂಗ್ರೆಸ್ ನಾಯಕರಿಗೂ ತಟ್ಟಿದ ಚಳಿ

ಕಾಂಗ್ರೆಸ್ ನಾಯಕರಿಗೂ ತಟ್ಟಿದ ಚಳಿ

ಕಾಂಗ್ರೆಸ್ ಪಕ್ಷದ 130ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ನಾಯಕರಿಗೂ ಭಾನುವಾರ ಚಳಿ ಚಟ್ಟಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಶೀಲಾ ದೀಕ್ಷಿತ್ ಮುಂತಾದವರು ಕಂಡಿದ್ದು ಹೀಗೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿ ಕೇಂದ್ರ ಸಚಿವರು

ಹುಟ್ಟು ಹಬ್ಬದ ಸಂಭ್ರಮದಲ್ಲಿ ಕೇಂದ್ರ ಸಚಿವರು

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಇಂದು 62ನೇ ಹುಟ್ಟು ಹಬ್ಬದ ಸಂಭ್ರಮ. ಬೆಳಗ್ಗೆ ವಾಕಿಂಗ್‌ಗೆ ಹೋಗಿದ್ದ ಅವರು ಚಳಿಯ ನಡುವೆಯೂ ಲೋಧಿ ಗಾರ್ಡ್‌ನ್‌ನಲ್ಲಿ ವಾಯು ವಿಹಾರಿಗಳ ಜೊತೆ ಮಾತುಕತೆ ನಡೆಸಿದರು.

ಚಳಿಯ ನಡುವೆ ಸೈಕಲ್ ಸವಾರಿ

ಚಳಿಯ ನಡುವೆ ಸೈಕಲ್ ಸವಾರಿ

ಭಾನುವಾರ ಮುಂಜಾನೆ ಮಂಜು ಮುಸುಕಿದ ರಸ್ತೆಗಳ ಮೇಲೆ ಸೈಕಲ್ ತುಳಿಯುತ್ತಾ ಕೆಲಸಕ್ಕೆ ಹೊರಟಿದ್ದ ಜನರು ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

ಅಬ್ಬಾ ಏನ್ ಚಳಿ

ಅಬ್ಬಾ ಏನ್ ಚಳಿ

ದೆಹಲಿಯಲ್ಲಿ ಚಳಿಯ ನಡುವೆಯೇ ಜನರು ಟೆಂಪೋ ಟ್ರಾವೆಲರ್‌ ಏರಿ ಹೊರಟಿದ್ದು ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

English summary
The national capital New Delhi continued to reel under intense cold conditions as a blanket of fog affected visibility and badly hit rail operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X