ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರ ಕುಟುಂಬಕ್ಕೆ ತುಮಕೂರು ಜನತೆ ಶಾಪದಿಂದ ಸರ್ಕಾರ ಪತನ: ಸಂಸದ ಬಸವರಾಜು

|
Google Oneindia Kannada News

ನವದೆಹಲಿ, ಜುಲೈ 24: ತುಮಕೂರಿನ ಜನರು ದೇವೇಗೌಡರ ಕುಟುಂಬಕ್ಕೆ ನೀಡಿದ ಶಾಪದಿಂದಲೇ ರಾಜ್ಯದ ಸಮ್ಮಿಶ್ರ ಸರ್ಕಾರ ಪತನಗೊಂಡಿದೆ ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜು ಹೇಳಿದರು.

ಕುಡಿಯಲು ನೀರು ಕೊಡದ ಕಾರಣಕ್ಕೆ ದೇವೇಗೌಡರ ಕುಟುಂಬಕ್ಕೆ ಶಾಪ ತಟ್ಟಿದೆ. ಅನೇಕ ವರ್ಷಗಳಿಂದ ನೀರಾವರಿಗೆ ಹಾಗೂ ಕುಡಿಯುವುದಕ್ಕೆ ನೀರಿಲ್ಲದೆ ಸಂಕಟಪಡುತ್ತಿದ್ದ ತುಮಕೂರಿನ ಜನರ ಆಕ್ರಂದನದ ಫಲವೇ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರದ ಪತನ ಎಂದು ಆರೋಪಿಸಿದರು.

ಗೌಡರ ಸೋಲಿಗೆ ಎದುರಾಳಿ, ಬಿಜೆಪಿ ಸಂಸದ ಬಸವರಾಜ್ ಕೊಟ್ಟ ಕಾರಣಗಳು?ಗೌಡರ ಸೋಲಿಗೆ ಎದುರಾಳಿ, ಬಿಜೆಪಿ ಸಂಸದ ಬಸವರಾಜ್ ಕೊಟ್ಟ ಕಾರಣಗಳು?

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿರುವುದು ಜನತೆ ನಮ್ಮ ಪರವಾಗಿ ತೀರ್ಪು ನೀಡಿದ್ದಾರೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.

coalition government collapsed curse of Tumakuru people to Deve gowda family bjp basavaraj

ಮೈತ್ರಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ 14 ತಿಂಗಳು ನರಕವನ್ನು ನೋಡಿದ್ದೇವೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆಯೇ ಇರುವ ಪರಿಸ್ಥಿತಿಯನ್ನು ಕಂಡಿದ್ದೇವೆ. ಇದಕ್ಕೆ ಅತೃಪ್ತ ಶಾಸಕರು ರಾಜೀನಾಮೆ ನೀಡಿರುವುದು ಸಾಕ್ಷಿ ಎಂದರು.

ದೇವೇಗೌಡರ ಮೇಲೆ ಗೆದ್ದ ಬಸವರಾಜು ಮುಂದಿನ ಎಲೆಕ್ಷನ್ ಸ್ಪರ್ಧಿಸಲ್ಲ ದೇವೇಗೌಡರ ಮೇಲೆ ಗೆದ್ದ ಬಸವರಾಜು ಮುಂದಿನ ಎಲೆಕ್ಷನ್ ಸ್ಪರ್ಧಿಸಲ್ಲ

ನೂತನ ಸರ್ಕಾರವು ತುಮಕೂರು, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ಬೆಮಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ನೀರಾವರಿ ಸೌಲಭ್ಯ ಒದಗಿಸಲು ಒಂದು ಲಕ್ಷ ಕೋಟಿ ರೂಪಾಯಿ ಮೀಸಲಿಡಬೇಕು ಎಂದು ಮನವಿ ಮಾಡಿದರು.

English summary
Tumakuru BJP MP GS Bavaraj said that, coalition government was collapsed due to the curse by Tumakuru people to Deve Gowda family for not giving them the water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X