ಅಯೋಧ್ಯೆ ತೀರ್ಪಿಗೂ ಮುನ್ನ 'ಅವರೊಂದಿಗೆ' ಸಿಜೆಐ ಚರ್ಚೆ ನಡೆಸಿದ್ದೇಕೆ?
ನವದೆಹಲಿ, ನವೆಂಬರ್ 08: ಅಯೋಧ್ಯೆ ರಾಮಜನ್ಮಭೂಮಿ ವಿವಾದಕ್ಕೆ ಸಂಬಂದಿಸಿದಂತೆ ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು ನವೆಂಬರ್ 09, ಶನಿವಾರದಂದು ಹೊರಬೀಳಲಿದ್ದು, ತನ್ನಿಮಿತ್ತ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಉತ್ತರ ಪ್ರದೇಶದ ಉನ್ನತಾಧಿಕಾರಿಗಳನ್ನು ಕರೆಸಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ನ. 09, ಬೆಳಗ್ಗೆ 10.30ಕ್ಕೆ ಅಯೋಧ್ಯಾ ಭೂ ವಿವಾದ ಪ್ರಕರಣದ ಅಂತಿಮ ತೀರ್ಪು
ಆ ನಂತರವೇ ನಾಳೆಯೇ ತೀರ್ಪು ಪ್ರಕಟಗೊಳ್ಳುವ ಬಗ್ಗೆ ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೇಗಿದೆ ಎಂಬ ಬಗ್ಗೆ ಗೊಗೊಯ್ ಚರ್ಚೆ ನಡೆಸಿದ್ದು, ಸುಸ್ಥಿತಿಯಲ್ಲಿದೆ, ಯಾವುದೇ ಸಮಸ್ಯೆಯಿಲ್ಲ, ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎಂದು ಉನ್ನತಾಧಿಕಾರಿಗಳು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ರಾತ್ರಿಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭದ್ರತಾ ವ್ಯವಸ್ಥೆಯ ಅವಲೋಕನ ಮಾಡಿದ್ದು, ಅಯೋಧ್ಯೆ ಮತ್ತು ಲಕ್ನೋ ಗಳಲ್ಲಿ ಎರಡು ತುರ್ತು ಹೆಲಿಕಾಪ್ಟರ್ ಗಳನ್ನೂ ನಿಯೋಜಿಸುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.