ಭಾರತದ ಗಡಿಯೊಳಗೆ ಸೆರೆ ಸಿಕ್ಕ ಚೀನಾ ಸೈನಿಕ: ಸೇನೆಯಿಂದ ವಿಚಾರಣೆ
ನವದೆಹಲಿ, ಜನವರಿ 09: ಭಾರತ ಮತ್ತು ಚೀನಾ ನಡುವಿನ ಗಡಿ ಸಮಸ್ಯೆ ಇನ್ನೂ ಬೆಂಕಿ ಮುಚ್ಚಿದ ಕೆಂಡದಂತಿದೆ. ಆದರೆ ಗಡಿಯಲ್ಲಿ ಬಿಎಸ್ಎಫ್ ಸೇರಿದಂತೆ ಮೂರು ವಿಭಾಗದ ಸೇನೆ ಹದ್ದಿನ ಕಣ್ಣಿಟ್ಟಿದೆ. ಇದರ ನಡುವೆಯೂ ಭಾರತದ ಗಡಿಯೊಳಗೆ ಚೀನಾ ಸೈನಿಕನೊಬ್ಬನು ಸೆರೆ ಸಿಕ್ಕಿದ್ದಾನೆ.
ಲಡಾಖ್ ಬಳಿಯ ದಕ್ಷಿಣ ಪ್ಯೊಂಗ್ಯಾಂಗ್ ಸರೋವರದಲ್ಲಿ ಭಾರತಕ್ಕೆ ನಿಯಂತ್ರಣ ರೇಖೆ (ಎಲ್ಒಸಿ) ದಾಟಿದ್ದ ಚೀನಾದ ಸೈನಿಕನನ್ನು ಭಾರತೀಯ ಸೇನೆಯು ವಶಕ್ಕೆ ತೆಗೆದುಕೊಂಡಿತು.
ಪಾಕಿಸ್ತಾನಕ್ಕೆ ಮತ್ತೊಂದು ಸರ್ಜಿಕಲ್ ದಾಳಿಯ ಭಯ
ಇಂಡೋ - ಚೀನಾ ಉದ್ವಿಗ್ನತೆಯ ಕೇಂದ್ರವಾಗಿದ್ದ ಲಡಾಖ್ನ ಪಾಂಗೊಂಗ್ ಸರೋವರದ ಬಳಿ ಚೀನಾದ ಸೈನಿಕನನ್ನು ಸೇನೆಯು ಬಂಧಿಸಿದೆ.
ನಿಯಂತ್ರಣ ರೇಖೆಯನ್ನು ದಾಟಿದ ವ್ಯಕ್ತಿಯನ್ನು ಸೇನೆಯು ಭಾರತೀಯ ಭೂಪ್ರದೇಶಕ್ಕೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ. ವಾಸ್ತವಿಕ ರೇಖೆಯನ್ನು ದಾಟಲು ಹಿಂದಿನ ಕಾರಣಗಳನ್ನು ತನಿಖೆ ಮಾಡುತ್ತಿದೆ, ಭಾರತೀಯ ನೆಲೆಗಳ ಮೇಲೆ ಕಣ್ಣಿಡಲು ಸೈನಿಕ ಒಳನುಸುಳಿದ್ದಾನೆಯೇ? ಇಲ್ಲಿಗೆ ಏಕೆ ಬಂದಿದ್ದಾನೆ ಅಥವಾ ಅಥವಾ ಕಳೆದುಹೋಗಿದ್ದಾನೆಯೇ ಎಂದು ಪ್ರಶ್ನಿಸಲಾಗುತ್ತಿದೆ.
ಭಾರತೀಯ ಸೇನೆ ಮತ್ತು ಕೇಂದ್ರವು ಚೀನಾ ಸೈನಿಕನ ಬಂಧನದ ಬಗ್ಗೆ ಪೂರ್ಣ ಮಾಹಿತಿ ನೀಡಬೇಕಿದೆ. ಉಭಯ ದೇಶಗಳ ನಡುವಿನ ಗಡಿ ಉದ್ವಿಗ್ನತೆಯ ಮಧ್ಯೆ ಚೀನಾ ಈ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಿದೆ. ಅದರ ಭಾಗವಾಗಿ ಸೈನಿಕನನ್ನು ಉದ್ದೇಶಪೂರ್ವಕವಾಗಿ ಕಳುಹಿಸಲಾಗಿದೆ ಎಂಬ ಅನುಮಾನವೂ ಇದೆ.