ಹಿಮಾಚಲ ಪ್ರದೇಶ ಮಾಜಿ ಸಿಎಂ ವಿರುದ್ಧ ಸಿಬಿಐ ಚಾರ್ಜ್ ಶೀಟ್
ನವದೆಹಲಿ, ಫೆಬ್ರವರಿ 22: ಹಿಮಾಚಲ ಪ್ರದೇಶದ ಮಾಜಿ ಸಿಎಂ ವೀರಭದ್ರಸಿಂಗ್ ವಿರುದ್ಧ ಸಿಬಿಐಯು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಿಸಿದೆ.
ವೀರಭದ್ರ ಸಿಂಗ್ ಅವರು ಯುಪಿಎ ಅವಧಿಯ ಸಮಯದಲ್ಲಿ ಕೇಂದ್ರ ಸಚಿವರಾಗಿದ್ದಾರೆ ಸುಮಾರು 10 ಕೋಟಿ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ ಹಾಗೂ ಅದನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಚಾರ್ಜ್ಶೀಟ್ ಅನ್ನು ಆರೋಪಿಗೆ ಓದಿ ಹೇಳಲಾಗಿದ್ದು, ವೀರಭದ್ರ ಸಿಂಗ್ ಅವರು ತಮ್ಮದು ತಪ್ಪಿಲ್ಲವೆಂದು ತಾವು ವಿಚಾರಣೆ ಎದುರಿಸುವುದಾಗಿ ನ್ಯಾಯಾಲಯಕ್ಕೆ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 3,4,5 ನೇ ತಾರೀಖಿನಂದು ಸಾಕ್ಷಿಗಳ ಹೇಳಿಕೆಯನ್ನು ದಾಖಲು ಮಾಡಲು ಸಿಬಿಐಗೆ ನ್ಯಾಯಾಲಯವು ತಿಳಿಸಿದೆ.
ಇಂದು ವೀರಭದ್ರ ಸಿಂಗ್ ಮತ್ತು ಅವರ ಪತ್ನಿ ಕೋರ್ಟ್ಗೆ ಹಾಜರಾಗಿದ್ದರು, ಮತ್ತು ವಿಚಾರಣೆ ನಡೆವಾಗ ಕೋರ್ಟ್ಗೆ ಹಾಜರಾಗುವುದರಿಂದ ಬಿಡುಗಡೆ ನೀಡಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಕೋರ್ಟ್ ಸಿಬಿಐಗೆ ಸೂಚಿಸಿತು.
ಇದೇ ಪ್ರಕರಣ ಈ ಕುರಿತಂತೆ ಸಿಬಿಐ, ಸಿಂಗ್ ಹಾಗೂ ಅವರ ಕುಟುಂಬದ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿದೆ. ಜೊತೆಗೆ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಸಹ ವೀರಭದ್ರ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದೆ.