ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಮಾ ಭಾರತಿ ನೇತೃತ್ವದಲ್ಲಿ ಕರ್ನಾಟಕ-ತಮಿಳುನಾಡು ನಡುವೆ ಸಂಧಾನ
ನವದೆಹಲಿ, ಸೆ. 28: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಪ್ರತಿನಿಧಿಗಳ ನಡುವೆ ತಾತ್ಕಾಲಿಕ ಸಂಧಾನ ಸಭೆಯನ್ನು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಕರೆದಿದ್ದಾರೆ.
ಎರಡೂ
ರಾಜ್ಯಗಳ
ಮುಖ್ಯಸ್ಥರನ್ನು
ಕರೆದು
ಸಭೆ
ನಡೆಸುವಂತೆ
ಸುಪ್ರೀಂಕೋರ್ಟ್
ಸೂಚನೆ
ನೀಡಿತ್ತು.
ಈ
ಸಂಬಂಧ
ರಾಜ್ಯ
ಸರ್ಕಾರದ
ಮುಖ್ಯ
ಕಾರ್ಯದರ್ಶಿಗಳಿಗೆ
ಪತ್ರವನ್ನು
ಬರೆದಿದ್ದು,
ಸಭೆಗೆ
ಹಾಜರಾಗುವಂತೆ
ಕೋರಿದೆ.[ನಿರ್ವಹಣಾ
ಮಂಡಳಿ
ರಚನೆ,
ಸುಪ್ರೀಂ
ಪೀಠಗಳಲ್ಲೇ
ದ್ವಂದ್ವ!]
ಯಾವಾಗ?: ಸೆಪ್ಟೆಂಬರ್ 29ರ ಗುರುವಾರ ಬೆಳಗ್ಗೆ 11.30ಕ್ಕೆ
ಎಲ್ಲಿ? : ನವದೆಹಲಿಯ ಶ್ರಮಶಕ್ತಿ ಭವನದ ಕಮಿಟಿ ಹಾಲ್ ನಲ್ಲಿ ಸಭೆ[ನೀರು ರಕ್ಷಿಸಿ, ಇಲ್ಲಾ ಕಠಿಣ ಬೇಸಿಗೆ ಎದುರಿಸಿ, ಖಡಕ್ ಎಚ್ಚರಿಕೆ!]
ಸಭೆಯಲ್ಲಿ ಯಾರಿರುತ್ತಾರೆ.?: ಉಭಯ ರಾಜ್ಯಗಳ ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು, ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಿಎಂ ನಿಯೋಜಿತ ಯಾವುದೇ ಪ್ರಮುಖ ಅಧಿಕಾರಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಸಭೆಯಲ್ಲಿ ಭಾಗವಹಿಸಬಹುದು ಎಂದು ಕೇಂದ್ರ ಜಲಸಂಪನ್ಮೂಲ ಇಲಾಖೆಯ ಪತ್ರದಲ್ಲಿ ಸೂಚಿಸಲಾಗಿದೆ.[ಕಾವೇರಿ ನೀರು ಬಿಡುವುದು ಬಿಡದಿರುವುದು ದೈವೇಚ್ಛೆ ಮೈಲಾರ್ಡ್!]
ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಗುಣಮುಖರಾಗದ ಕಾರಣ, ಜಯಲಲಿತಾ ಅವರ ಬದಲಿಗೆ ಲೋಕೋಪಯೋಗಿ ಸಚಿವ ಎಡಪ್ಪಡಿ ಎಸ್ ಪಳನಿಸ್ವಾಮಿ ಅವರು ಸಭೆಗೆ ಹಾಜರಾಗಲಿದ್ದಾರೆ.
Comments
uma bharti cauvery dispute siddaramaiah jayalalithaa karnataka tamil nadu supreme court ಉಮಾ ಭಾರತಿ ಕಾವೇರಿ ವಿವಾದ ಸಿದ್ದರಾಮಯ್ಯ ಜಯಲಲಿತಾ ಕರ್ನಾಟಕ ತಮಿಳುನಾಡು ಸುಪ್ರೀಂಕೋರ್ಟ್
English summary
Union water resources secretary Shashi Shekhar said Ms Uma Bharti would chair the meeting at 11.30 am on Thursday.