ಉಪಚುನಾವಣೆ ಸೋಲು ಬಿಜೆಪಿಗೆ ಎಚ್ಚರಿಕೆಯ ಪಾಠ: ಸ್ವಾಮಿ
ನವದೆಹಲಿ, ಜೂನ್ 01: "ಉಪಚುನಾವಣೆಯಲ್ಲಿನ ಹೀನಾಯ ಸೋಲು ಬಿಜೆಪಿಗೆ ಎಚ್ಚರಿಕೆಯ ಪಾಠ" ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
4 ಲೋಕಸಭಾ ಮತ್ತು 10 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಕ್ರಮಾವಾಗಿ ಒಂದು-ಒಂದು ಸ್ಥಾನಗಳಲ್ಲಿ ಮಾತ್ರ ಜಯಗಳಿಸಿತ್ತು. ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲು ಬಿಜೆಪಿ ಉಪಚುನಾವಣೆಯಲ್ಲಿ ಹೀನಾಯ ಪ್ರದರ್ಶನ ತೋರಿದ್ದು ಚರ್ಚೆಗೆ ಗ್ರಾಸವಾಗಿತ್ತು.
ವಿಶ್ಲೇಷಣೆ: ಗೆಳೆಯರನ್ನು ಗೆಲ್ಲೋದು ಹೇಗೆ ಮೋದಿ-ಶಾಗೆ ಪಾಠಗಳಿವೆ!
"ಬಿಜೆಪಿ ಸೋಲಿನಿಂದಾಗಿ ಪಕ್ಷದ ಕಾರ್ಯಕರ್ತರು ಬೇಸರಪಡುವ ಅಗತ್ಯವಿಲ್ಲ. ಪಕ್ಷ ಎಲ್ಲ ಕಾರ್ಯಕರ್ತರಿಗೂ ಗೌರವ ನೀಡಬೇಕು. ಪಕ್ಷವನ್ನು ಕಾರ್ಪೋರೇಟ್ ಆಫೀಸ್ ರೀತಿಯಲ್ಲಿ ನಡೆಸುವುದು ಸರಿಯಲ್ಲ. ಈ ಫಲಿತಾಂಶ ನಮಗೆ ಎಚ್ಚರಿಕೆಯ ಪಾಠ" ಎಮದು ಸ್ವಾಮಿ ಹೇಳಿದ್ದಾರೆ.
ಒಟ್ಟು 14 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಉತ್ತರಾಖಂಡ್ ನ ತರಾಲಿ ವಿಧಾನಸಭಾ ಕ್ಷೇತ್ರ ಮತ್ತು ಮಹಾರಾಷ್ಟ್ರದ ಪಲ್ಘರ್ ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಿತ್ತು. ಉಳಿದೆಲ್ಲ ಕಡೆ ಆಯಾ ರಾಜ್ಯದ ಪ್ರಾದೇಶಿಕ ಪಕ್ಷಗಳೇ ಮೇಲುಗೈ ಸಾಧಿಸಿದ್ದವು. ಮೇ 28 ರಂದು ನಡೆದಿದ್ದ ಉಪಚುನಾವಣೆಗಳ ಫಲಿತಾಂಶ ಮೇ 31 ರಂದು ಹೊರಬಿದ್ದಿತ್ತು.