ಬಜೆಟ್ ಮಂಡನೆ ವೇಳೆ ಬಸವಣ್ಣರ ನೆನೆದ ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ, ಜುಲೈ 05: ಕರ್ನಾಟದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ನಿರ್ಮಲಾ ಸೀತಾರಾಮನ್ ಅವರು ಮೊದಲ ಬಾರಿಗೆ ಬಜೆಟ್ ಮಂಡಿಸಿದರು. ಸಹಜವಾಗಿಯೇ ಕರ್ನಾಟಕದ ಬಗ್ಗೆ ಉಲ್ಲೇಖವಾಗಲಿ, ಕರ್ನಾಟಕಕ್ಕೆ ವಿಷೇಶ ಯೋಜನೆಯ ನಿರೀಕ್ಷೆ ಇತ್ತು.
ರಾಜ್ಯಕ್ಕೆ ವಿಶೇಷವಾಗಿ ಏನನ್ನೂ ಕೊಡದೇ ಇದ್ದರು, ತಮ್ಮ ಸುದೀರ್ಘ ಬಜೆಟ್ ಭಾಷಣದಲ್ಲಿ ಬಸವಣ್ಣ ಅವರನ್ನು ನೆನಪಿಸಿಕೊಂಡರು ನಿರ್ಮಲಾ ಸೀತಾರಾಮಾನ್.
ಕೇಂದ್ರ ಬಜೆಟ್ Live Updates: ತೈಲ, ಚಿನ್ನ, ಮದ್ಯ ದುಬಾರಿ
ಬಸವಣ್ಣ ಅವರ 'ಕಾಯಕವೇ ಕೈಲಾಸ' ವಾಕ್ಯವನ್ನು ನೆನೆದ ನಿರ್ಮಲಾ ಸೀತಾರಾಮನ್, ಭಾರತ ಸರ್ಕಾರವು ಬಸವಣ್ಣ ಅವರ ಕಾಯಕವೇ ಕೈಲಾಸ ಧ್ಯೇಯ ವಾಕ್ಯದಂತೆ ಜನರಿಗೆ ಸ್ವಗೌರವ ಪ್ರಾಪ್ತಿಯುಂತೆ ಉದ್ಯೋಗ ಮಾಡುವ ಶಕ್ತಿ ಒದಗಿಸಲು ಬದ್ಧವಾಗಿದೆ ಎಂದರು.
ತಮಿಳುನಾಡು ಮೂಲದವರಾದ ನಿರ್ಮಲಾ ಸೀತಾರಾಮನ್ ಅವರು ತಮಿಳಿನ ಸಣ್ಣ ಕತೆಯೊಂದನ್ನೂ ಬಜೆಟ್ ನಡುವೆ ಉಲ್ಲೇಖಿಸಿದರು. ಪುರನಾನೂರು ಎಂಬ ರಾಜನ ಬಗ್ಗೆ ಇರುವ ಕಾವ್ಯದ ಕೆಲವು ಭಾಗಗಳನ್ನು ಉಲ್ಲೇಖಿಸಿದರು.
ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?
ಅಷ್ಟೆ ಅಲ್ಲದೆ, ಬಜೆಟ್ನ ಆರಂಭದಲ್ಲಿಯೇ ಹಿಂದಿನ ಕವನವೊಂದನ್ನು ಸಹ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.