ಬಜೆಟ್ 2019: ಸ್ಟಾರ್ಟ್ ಅಪ್ಗೆ ತಲೆನೋವಾಗಿದ್ದ ಏಂಜಲ್ ಟಾಕ್ಸ್ ರದ್ದು
ನವದೆಹಲಿ, ಜುಲೈ 05: ಸ್ಟಾರ್ಟ್ ಅಪ್ಗಳಿಗೆ ತಲೆನೋವಾಗಿದ್ದ ಏಂಜಲ್ ಟ್ಯಾಕ್ಸ್ ಅನ್ನು ತೆಗೆದು ಹಾಕಿರುವುದಾಗಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಘೋಷಿಸಿದ್ದಾರೆ.
ಕೇಂದ್ರ ಬಜೆಟ್ Liive Updates: ಈ ವರ್ಷದಲ್ಲಿ ದೇಶ ಬಯಲುಶೌಚ ಮುಕ್ತ
ಏಂಜಲ್ ಟ್ಯಾಕ್ಸ್ ತೆಗೆದುಹಾಕುವಂತೆ ಈ ಹಿಂದೆ ರಾಹುಲ್ ಗಾಂಧಿ ಅವರು ಸಹ ಒತ್ತಾಯಿಸಿದ್ದು, ಕಾಂಗ್ರೆಸ್ನ ಚುನಾವಣೆ ಪ್ರಣಾಳಿಕೆಯಲ್ಲೂ ಸಹ ಇದನ್ನು ಸೇರಿಸಲಾಗಿತ್ತು. ಆದರೆ ಇದನ್ನು ತೆಗೆದು ಹಾಕಿ ಸ್ಟಾರ್ಟ್ ಅಪ್ ಗುರಿ ಹೊಂದಿದವರಿಗೆ ಕೇಂದ್ರವು ನಿರಾಳಗೊಳಿಸಿದೆ.
3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಬಂಪರ್, ಪಿಂಚಣಿ ಯೋಜನೆ ಘೋಷಣೆ
ಬಜೆಟ್ ಭಾಷಣದ ಸಂದರ್ಭದಲ್ಲಿಯೂ ಇದನ್ನು ಉಲ್ಲೇಖಿಸಿದ ನಿರ್ಮಲಾ ಸೀತಾರಾಮನ್ ಅವರು, ಏಂಜಲ್ ಟ್ಯಾಕ್ಸ್ ಅನ್ನು ರದ್ದು ಮಾಡಲಾಗಿದ್ದು, ಈ ವಿಷಯ ಸದನದ ಒಳಗಿನ ಕೆಲವರಿಗೆ ಸಂತೋಶ ತಂದಿರಬಹುದು ಎಂದು ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದರು.
ಏಂಜಲ್ ಟ್ಯಾಕ್ಸ್ ರದ್ದು ಮಾತ್ರವಲ್ಲದೆ, ಸ್ಟಾರ್ಟ್ ಅಪ್ ಸ್ಥಾಪಿಸುವವರಿಗೆ ತೆರಿಗೆ ತನಿಖೆಯಿಂದಲೂ ವಿನಾಯಿತಿಯನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ.