ಜ.21ಕ್ಕೆ ಲಖಿಂಪುರಕ್ಕೆ ಭೇಟಿ: ಜ.31ರಂದು ‘ವಿರೋಧ್ ದಿವಸ್’-ಟಿಕಾಯತ್
ನವದೆಹಲಿ ಜನವರಿ 16: ರೈತ ಪ್ರತಿಭಟನೆಗಳು ಸ್ಥಗಿತಗೊಂಡಿರಬೇಕು ಆದರೆ ಕೃಷಿ ಉತ್ಪನ್ನಗಳ ಮೇಲಿನ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕುರಿತು ನಿರ್ಣಯವಾಗುವವರೆಗೆ ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಗಳ ಆಂದೋಲನ ಮುಂದುವರಿಯುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಹೇಳಿದೆ.
ಇಲ್ಲಿಯವರೆಗೆ ಕೇಂದ್ರವು ಎಂಎಸ್ಪಿ ಕುರಿತು ಸಮಿತಿಯನ್ನು ರಚಿಸಿಲ್ಲ ಅಥವಾ ಅದರ ಬಗ್ಗೆ ನಮ್ಮನ್ನು ಸಂಪರ್ಕಿಸಿಲ್ಲ. ಲಖಿಂಪುರ ಖೇರಿ ಘಟನೆಯಲ್ಲಿ ಭಾಗಿಯಾಗಿರುವ ಆಶಿಸ್ ಮಿಶ್ರಾ ಅವರ ತಂದೆ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ಕೇಂದ್ರ ಸರ್ಕಾರ ಅಧಿಕಾರದಿಂದ ತೆಗೆದುಹಾಕಿಲ್ಲ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ನಾವು ಜನವರಿ 31 ರಂದು 'ವಿರೋಧ್ ದಿವಸ್' ಆಚರಿಸುತ್ತೇವೆ ಎಂದು ಬಿಕೆಯುನ ಯುಧ್ವೀರ್ ಸಿಂಗ್ ಹೇಳಿದ್ದಾರೆ.
ರೈತರಲ್ಲಿ
ಒಡಕು
ಮೂಡಿಸುವ
ಪ್ರಧಾನಿ
ಪ್ರಯತ್ನ
ಯಶಸ್ವಿಯಾಗದು:
ರಾಕೇಶ್
ಟಿಕಾಯತ್
ರೈತರ
ಆಂದೋಲನವನ್ನು
ಮುಂದೂಡುವ
ಬಗ್ಗೆ
ಸರ್ಕಾರಕ್ಕೆ
ನೆನಪಿಸಿದ
ಸಿಂಗ್,
ನಮ್ಮ
ಚಳವಳಿಯನ್ನು
ಡಿಸೆಂಬರ್
11
ರಂದು
ಮುಂದೂಡಲಾಗಿದೆ.
ಸರ್ಕಾರವು
ನಮ್ಮ
ಬೇಡಿಕೆಗಳಿಗೆ
ಇನ್ನೂ
ಸ್ಪಂದಿಸಿಲ್ಲ.
ನಾವು
ಜನವರಿ
31
ರಂದು
ದೇಶದಾದ್ಯಂತ
ಸರ್ಕಾರದ
ಪ್ರತಿಕೃತಿಗಳನ್ನು
ಸುಡುತ್ತೇವೆ.
ಫೆಬ್ರವರಿ
1
ರಿಂದ
ಉತ್ತರಪ್ರದೇಶದಲ್ಲಿ
ಒಕ್ಕೂಟವು
ಮತ್ತೆ
ಆಂದೋಲನವನ್ನು
ಪುನರಾರಂಭಿಸಲಿದೆ
ಎಂದು
ಅವರು
ಎಚ್ಚರಿಸಿದ್ದಾರೆ.
Till now, Centre has neither formed a committee on MSP nor approached us on it. Govt hasn't removed the MoS whose son is involved in Lakhimpur Kheri incident. If govt doesn't respond to our demands then we'll celebrate 'Virodh Diwas' on Jan 31: Yudhvir Singh, Bhartiya Kisan Union pic.twitter.com/YGkUtqI5PP
— ANI (@ANI) January 15, 2022
ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ಸರ್ಕಾರ
ದೇಶದ ಕೆಲ ಭಾಗಗಳಲ್ಲಿ ವಿವಾದ ಸೃಷ್ಟಿಸಿದ್ದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 19ರಂದು ಘೋಷಿಸಿದರು. ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡುವ ವೇಳೆ, ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ. ನಮ್ಮ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಅದರಲ್ಲೂ ವಿಶೇಷವಾಗಿ ಸಣ್ಣ ರೈತರ ಕಲ್ಯಾಣಕ್ಕಾಗಿ, ದೇಶದ ಕೃಷಿ ಹಿತದೃಷ್ಟಿಯಿಂದ, ದೇಶದ ಹಿತದೃಷ್ಟಿಯಿಂದ, ಹಳ್ಳಿಯ ಬಡವರ ಉಜ್ವಲ ಭವಿಷ್ಯಕ್ಕಾಗಿ, ಸಂಪೂರ್ಣ ಪ್ರಾಮಾಣಿಕತೆಯಿಂದ ಒಳ್ಳೆಯ ಉದ್ದೇಶದಿಂದ ಈ ಕಾನೂನನ್ನು ತಂದಿದ್ದೆವು. ಆದರೆ ಅಂತಹ ಪವಿತ್ರವಾದ, ಸಂಪೂರ್ಣ ಶುದ್ಧವಾದ ರೈತರ ಅನುಕೂಲಕ್ಕಾಗಿ ನಾವು ಪ್ರಯತ್ನಿಸಿದರೂ ಅದನ್ನು ಕೆಲವು ರೈತರಿಗೆ ವಿವರಿಸಲು ಸಾಧ್ಯವಾಗಲಿಲ್ಲ, ಹಾಗಾಗಿ ನಾವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದರು.