ಬಿಜೆಪಿ ಪ್ರಣಾಳಿಕೆ: 2 ರುಗೆ ಗೋಧಿ ಹಿಟ್ಟು, 10 ಲಕ್ಷ ಉದ್ಯೋಗ ಸೃಷ್ಟಿ
ನವದೆಹಲಿ, ಜನವರಿ 31: ದೆಹಲಿ ವಿಧಾನಸಭೆ ಚುನಾವಣೆಗಾಗಿ ಭರಪೂರ ಆಶ್ವಾಸನೆಯೊಂದಿಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಪ್ರಣಾಳಿಕೆ ಹೊರ ತರಲಾಗಿದೆ. 2 ಕೆ.ಜಿ ಗೋಧಿ ಹಿಟ್ಟು, ಶುದ್ಧ ಕುಡಿಯುವ ನೀರು, ವಾಯು ಮಾಲಿನ್ಯ ನಿಯಂತ್ರಣಕ್ಕೆ ತಡೆ, ಆಯುಷ್ಮಾನ್ ಯೋಜನೆ ವಿಸ್ತರಣೆ ಮುಂತಾದವು ಪ್ರಣಾಳಿಕೆಯಲ್ಲಿವೆ.
ಭಾರತೀಯ ಜನತಾ ಪಕ್ಷದ ಕೇಂದ್ರ ಕಚೇರಿಯಲ್ಲಿ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ, ದೆಹಲಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಹರ್ಷ್ ವರ್ಧನ್ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಪ್ರಣಾಳಿಕೆಯ
ಮುಖ್ಯಾಂಶಗಳು:
*
ಶುದ್ಧ
ಕುಡಿಯುವ
ನೀರು
ಪೂರೈಕೆಗಾಗಿ
ಕೇಂದ್ರ
ಸರ್ಕಾರದ
ನೆರವು.
*
ವಾಯು
ಮಾಲಿನ್ಯ
ನಿಯಂತ್ರಣಕ್ಕಾಗಿ
55,000
ಕೋಟಿ
ರು
ಕೇಂದ್ರದ
ನೆರವು
ಸಿಗಲಿದೆ.
ಪೂರ್ವ
ಪೆರಿಫರಲ್
ಎಕ್ಸ್
ಪ್ರೆಸ್
ಮೂಲಕ
ದೆಹಲಿ
ಟ್ರಾಫಿಕ್
ದಟ್ಟಣೆ
ಕಡಿಮೆಯಾಗಿದೆ.
*
ಕಾಲೋನಿ
ಅಭಿವೃದ್ಧಿ
ನಿಗಮ
ಸ್ಥಾಪಿಸಿ,
ಹೊಸ
ಬಡಾವಣೆ
ನಿರ್ಮಿಸಲಾಗುವುದು.
*
2
ರು
ಪ್ರತಿ
ಕೆ.ಜಿಯಂತೆ
ಗೋಧಿ,
ಇತರೆ
ಧಾನ್ಯಗಳ
ಹಿಟ್ಟನ್ನು
ನೀಡಲಾಗುವುದು.
*
ಆಯುಷ್ಮಾನ್
ಯೋಜನೆಯನ್ನು
ದೆಹಲಿಯಲ್ಲಿ
ಜಾರಿಗೊಳಿಸಲಾಗುವುದು
*
ಕಾಲೇಜಿನ
ವಿದ್ಯಾರ್ಥಿನಿಯರಿಗೆ
ಎಲೆಕ್ಟ್ರಿಕ್
ಸ್ಕೂಟಿ,
9-10
ಹುಡುಗಿಯರಿಗೆ
ಬೈಸಿಕಲ್
ವಿತರಣೆ.
*
ಹೆಣ್ಣು
ಶಿಶು
ಜನಿಸಿದರೆ,
ಮಗುವಿನ
ಹೆಸರಿನಲ್ಲಿ
ಬ್ಯಾಂಕ್
ಖಾತೆ
ಆರಂಭಿಸಲಾಗುವುದು,
21
ವರ್ಷವಾದಾಗ
ಆಕೆಯ
ಖಾತೆಯಲ್ಲಿ
2
ಲಕ್ಷ
ರು
ಜಮೆಯಾಗಿರುತ್ತದೆ.
ದೆಹಲಿ ಚುನಾವಣೆ: ಕೇಜ್ರಿವಾಲ್ ಗೆ ಶುಭ ಸುದ್ದಿ ಕೊಟ್ಟ ಸಮೀಕ್ಷೆ
2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಗೆದ್ದುಕೊಂಡಿತ್ತು. ಬಿಜೆಪಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆದರೆ 2017ರಲ್ಲಿ ಮುನ್ಸಿಪಾಲ್ ಕಾರ್ಪೊರೇಷನ್ ಚುನಾವಣೆ, 2019ರ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಲಯಕ್ಕೆ ಮರಳಿದೆ.
ಗ್ಯಾಲರಿ:
ದಿಲ್ಲಿ
ಗಲ್ಲಿಗಲ್ಲಿಗಳಲ್ಲಿ
ಚುನಾವಣೆ
ರಂಗೋ
ರಂಗು
ಈ
ಬಾರಿ
ಬಿಜೆಪಿ
ಮಿತ್ರ
ಪಕ್ಷ
ಜೆಜೆಪಿ
ಪಕ್ಷ
ಕೂಡಾ
ಕಣಕ್ಕಿಳಿಯಲಿದೆ.
ಆಮ್
ಆದ್ಮಿ
ಪಕ್ಷ
ಹಾಗೂ
ಕಾಂಗ್ರೆಸ್
ನಡುವೆ
ಮೈತ್ರಿ
ಮುರಿದಿರುವುದರಿಂದ
ಮತದಾರರನ್ನು
ಸೆಳೆಯುವುದು
ಬಿಜೆಪಿಗೆ
ಸುಲಭವಾಗಲಿದೆ.70
ವಿಧಾನಸಭಾ
ಕ್ಷೇತ್ರಗಳಿಗೆ
ಫೆಬ್ರವರಿ
8ರಂದು
ಮತದಾನ
ನಡೆಯಲಿದ್ದು,
ಫೆಬ್ರವರಿ
11ರಂದು
ಫಲಿತಾಂಶ
ಹೊರಬರಲಿದೆ.