ಎಂ.ಎಸ್.ಧೋನಿಯ ಭೇಟಿ ಮಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ
ನವದೆಹಲಿ, ಆಗಸ್ಟ್ 06: ಕ್ರಿಕೆಟಿಗ ಎಂ.ಎಸ್.ಧೋನಿ ಅವರನ್ನು ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಂದು ಭೇಟಿ ಮಾಡಿದರು.
ಲೋಕಸಭೆ ಚುನಾವಣೆಗೆ ಮುಂಚೆ 'ಸಮರ್ಥನ್ ಕೇಲಿಯೆ ಸಂಪರ್ಕ' (ಬೆಂಬಲಕ್ಕಾಗಿ ಭೇಟಿ) ಹೆಸರಿನ ಅಭಿಯಾನವನ್ನು ಬಿಜೆಪಿ ನಡೆಸುತ್ತಿದ್ದು, ಸೆಲೆಬ್ರಿಟಿಗಳನ್ನು ಭೇಟಿ ಆಗಿ ಅವರಿಗೆ ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿ ಅವರ ಬೆಂಬಲ ಪಡೆಯುವುದು ಈ ಅಭಿಯಾನದ ಉದ್ದೇಶವಾಗಿದೆ.
As part of "Sampark for Samarthan" initiative, met @msdhoni, one of the greatest finishers in world cricket. Shared with him several transformative initiatives and unprecedented work done by PM @narendramodi's govt in the last 4 years. pic.twitter.com/dpFnPWTwWn
— Amit Shah (@AmitShah) August 5, 2018
ಇಂದು ಮಹೇಂದ್ರ ಸಿಂಗ್ ಧೋನಿ ಅವರನ್ನು ಭೇಟಿಯಾದ ಅಮಿತ್ ಶಾ ಅವರು, ಮೋದಿ ಅವರ ಸಾಧನೆಗಳ ಮಾಹಿತಿಯುಳ್ಳ ಪುಸ್ತಕವನ್ನು ಅವರಿಗೆ ನೀಡಿದರು. ಜೊತೆಗೆ ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ರೈಲ್ವೆ ಸಚಿವ ಪಿಯೂಶ್ ಘೋಯಲ್ ಸಹ ಜೊತೆಗಿದ್ದರು.
ಧೋನಿ ಪತ್ನಿ ಸಾಕ್ಷಿಗೆ ಪ್ರಾಣ ಬೆದರಿಕೆ? ಆರ್ಮ್ಸ್ ಲೈಸೆನ್ಸ್ ಗೆ ಅರ್ಜಿ!
ಈಗಾಗಲೇ ಅಮಿತ್ ಶಾ ಅವರು ಈ ಅಭಿಯಾನದ ಅಡಿಯಲ್ಲಿ ಲತಾಮಂಗೇಶ್ಕರ್, ಕಪಿಲ್ ದೇವ್, ಮಾಧುರಿ ದೀಕ್ಷಿತ್ ಅವರುಗಳನ್ನು ಭೇಟಿ ಮಾಡಿದ್ದಾರೆ.