'90 ವರ್ಷದ ಅನುಭವಿ ಕಂಪನಿ, ಅನನುಭವಿ ರಿಲಯನ್ಸ್ ಅನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ'
ನವದೆಹಲಿ, ನವೆಂಬರ್ 14: ರಫೇಲ್ ಯುದ್ಧ ವಿಮಾನ ಖರೀದಿ ವಿಚಾರ ಬುಧವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಈ ವೇಳೆ ಕಲಾಪದಲ್ಲಿ ಯಾರು, ಏನು ಹೇಳಿದರು ಎಂಬ ಸಂಗತಿ ಬಹಳ ಆಸಕ್ತಿಕರವಾಗಿದೆ. ಅದರ ವಿವರಗಳು ಇಲ್ಲಿವೆ.
ಅರುಣ್ ಶೌರಿ: 1929ನೇ ಇಸವಿಯಲ್ಲಿ ಸ್ಥಾಪನೆಯಾಗಿ, ಆ ಪ್ರಮಾಣದ ಅನುಭವ ಇರುವ ಫ್ರಾನ್ಸ್ ನ ಡಸಾಲ್ಟ್ ಕಂಪನಿಯು ಅನುಭವವೇ ಇಲ್ಲದೇ ಕಂಪನಿಯೊಂದನ್ನು ಭಾಗೀದಾರ ಎಂದು ಆರಿಸಿಕೊಳ್ಳಲು ಸಾಧ್ಯವಿಲ್ಲ.
ಕೇಂದ್ರ
ಸರ್ಕಾರದ
ಕೆಂಗಣ್ಣಿಗೆ
ಗುರಿಯಾದ
ಶೌರಿ,
ಭೂಷಣ್
ಸಿಬಿಐ
ಭೇಟಿ!
ಅರುಣ್ ಶೌರಿ: ಸ್ವತಃ ಡಸಾಲ್ಟ್ ಕಂಪನ್ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು.
ಅರುಣ್ ಶೌರಿ: ಆಗಿನ ರಕ್ಷಣಾ ಸಚಿವ ಮನೋಹರ್ ಪರಿಕರ್ ಗೆ ಈ ವ್ಯವಹಾರದ ಬಗ್ಗೆ ಗೊತ್ತೇ ಇರಲಿಲ್ಲ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಅರುಣ್ ಶೌರಿ: ಯುದ್ಧ ವಿಮಾನ ಖರೀದಿಯ ಬೆಲೆ ಹೇಗೆ ಹೆಚ್ಚಾಯಿತು?
ಅರುಣ್ ಶೌರಿ: ವಿಮಾನವನ್ನು ತಯಾರು ಮಾಡುವುದಕ್ಕೆ ಎಚ್ಎಎಲ್ ಗೆ ಪೂರ್ಣ ಸಾಮರ್ಥ್ಯ ಇದೆ. ಈ ಬಗ್ಗೆ ಸರಕಾರ ನೀಡಿದ ಹೇಳಿಕೆ ಒಪ್ಪಲು ಸಾಧ್ಯವೇ ಇಲ್ಲ.
ರಫೇಲ್
ಒಪ್ಪಂದಕ್ಕೆ
ಎಚ್ಎಎಲ್ಅನ್ನು
ಏಕೆ
ಆಯ್ದುಕೊಳ್ಳಲಿಲ್ಲ:
ಕಾರಣ
ನೀಡಿದ
ಕೇಂದ್ರ
ಸರ್ಕಾರ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್: ನಾವೀಗ ಚರ್ಚೆ ಮಾಡುತ್ತಿರುವ ವಿಚಾರ ವಾಯು ಸೇನೆಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ನಾವು ಭಾರತೀಯ ವಾಯು ಸೇನೆಯಿಂದ ಒಬ್ಬರನ್ನು ಭೇಟಿ ಆಗಬೇಕು, ಸಚಿವಾಲಯದಿಂದ ಅಲ್ಲ.
ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್: ಅಂಥವರು ಇಲ್ಲಿ ಶೀಘ್ರದಲ್ಲೇ ಇರುತ್ತಾರೆ.
ರಫೇಲ್
ವಿಮಾನ
ಖರೀದಿ
ಪರವಾಗಿ
ವಾಯುಸೇನೆ
ಮುಖ್ಯಸ್ಥರು
ಹೇಳಿದ್ದೇನು?
ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ (ಕೇಂದ್ರ ಸರಕಾರ ಪರ ವಕಾಲತ್ತು ವಹಿಸಿರುವವರು): ನಮ್ಮ ಬಳಿ ಇರುವ ಶಸ್ತ್ರಾಸ್ತ್ರ ಹಾಗೂ ವೈಮಾನಿಕ ಶಕ್ತಿ ಬಗ್ಗೆ ರಹಸ್ಯ ಕಾಪಾಡಲಾಗುತ್ತದೆ. ನಮ್ಮ ಶಕ್ತಿ ಬಗ್ಗೆ ಶತ್ರುಗಳಿಗೆ ತಿಳಿದರೆ ಅಪಾಯಕಾರಿ ಪರಿಣಾಮ ಬೀರುತ್ತದೆ.
ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್: ಭಾರತದ ಸುಪ್ರೀಂ ಕೋರ್ಟ್ ಬಗ್ಗೆ ನಮಗೆ ಗೌರವ ಇರುವ ಕಾರಣಕ್ಕೆ ಕೋರ್ಟ್ ಗೆ ಮಾಹಿತಿ ನೀಡಿದ್ದೇವೆ. ಒಟ್ಟು ಬೆಲೆ, ಶಸ್ತ್ರಾಸ್ತ್ರಗಳ ಮಾಹಿತಿ ಸಹ ನೀಡಿದ್ದೇವೆ.