ಸಿಬಿಐ ಮುಖ್ಯಸ್ಥರು ಸೀಜರ್ನ ಪತ್ನಿಯಂತೆ, ಸಂಶಯಾತೀತರಾಗಿರಬೇಕು: ಅರುಣ್ ಜೇಟ್ಲಿ
ನವದೆಹಲಿ, ಅಕ್ಟೋಬರ್ 26: 'ಸಿಬಿಐನ ಎಲ್ಲ ಅಧಿಕಾರಿಗಳು, ಅದರಲ್ಲಿಯೂ ಮುಖ್ಯವಾಗಿ ಅತ್ಯುನ್ನತ ಸ್ಥಾನದ ಇಬ್ಬರು ಅಧಿಕಾರಿಗಳು ಸೀಜರ್ನ ಹೆಂಡತಿಯಂತೆ. ಅವರು ಎಲ್ಲ ಸಂಶಯಗಳಿಂದಲೂ ಹೊರತಾಗಿರಬೇಕು' ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಮಗಳ ಮದುವೆಗೆ ಪುಕ್ಕಟೆ ಸೇವೆ ಪಡೆದಿದ್ದ ಸಿಬಿಐನ ರಾಕೇಶ್ ಅಸ್ಥಾನಾ
ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ವಿರುದ್ಧ ಸೀಮಿತ ಅವಧಿಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸುಪ್ರೀಂಕೋರ್ಟ್ನ ಆದೇಶವನ್ನು ಸ್ವಾಗತಿಸಿದ ಅವರು, ಇದು ಸಕಾರಾತ್ಮಕ ಬೆಳವಣಿಗೆ. ದೇಶದ ಹಿತಾಸಕ್ತಿಗಾಗಿ ಸತ್ಯ ಹೊರಬರಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು.
ಸಿಬಿಐ ವಿವಾದ: 10 ದಿನಗಳಲ್ಲಿ ವರದಿ ಸಲ್ಲಿಸಲು ಸಿವಿಸಿಗೆ ಸುಪ್ರೀಂಕೋರ್ಟ್ ಸೂಚನೆ
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರನ್ನು ಭ್ರಷ್ಟಾಚಾರದ ಆರೋಪದಡಿ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಸೂಚಿಸಿದ ಸರ್ಕಾರದ ನಡೆಯನ್ನು ಸಮರ್ಥಿಸಿದರು.
ಇತ್ತೀಚಿನ ಬೆಳವಣಿಗೆಗಳು ಸಿಬಿಐನ ಪ್ರತಿಷ್ಠೆಗೆ ಹಾನಿ ಮಾಡಿವೆ. ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದರು.
The country couldn't afford to have two top officials of CBI that investigates corruption, being under inquiry or investigations themselves. The govt & CVC had firm intention to bring out the truth in an impartial & independent manner. The SC verdict has upheld that. @arunjaitley pic.twitter.com/CPhgdukKml
— BJP (@BJP4India) 26 October 2018
ಎರಡು ವಾರದಲ್ಲಿ ತನಿಖೆಗೆ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿರುವ ಸೂಚನೆ ತನಿಖೆಯನ್ನು ಬಲಗೊಳಿಸಲಿದೆ. ನಿವೃತ್ತ ನ್ಯಾಯಾಧೀಶರ ನೇಮಕ ನ್ಯಾಯಸಮ್ಮತ ತನಿಖೆಯ ಭರವಸೆ ಮೂಡಿಸಿದೆ ಎಂದು ಪ್ರತಿಕ್ರಿಯೆ ನೀಡಿದರು.
ಸಂವಿಧಾನಕ್ಕೆ ಮಾಡಿದ ಅವಮಾನ : ಮೋದಿ ವಿರುದ್ಧ ರಾಹುಲ್ ಕಿಡಿ
16ನೇ ಶತಮಾನದಲ್ಲಿ ಶೇಕ್ಸ್ಪಿಯರ್ ರಚಿಸಿದ ಜೂಲಿಯಸ್ ಸೀಜರ್ ನಾಟಕದಲ್ಲಿ ಬರುವ 'ಸೀಜರ್ನ ಪತ್ನಿ ಸಂಶಯಾತೀತಳಾಗಿರಬೇಕು' ವಾಕ್ಯವನ್ನು ಜೇಟ್ಲಿ ಇಲ್ಲಿ ಪ್ರಸ್ತಾಪಿಸಿದ್ದಾರೆ. ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ಶುದ್ಧಹಸ್ತರಾಗಿರಬೇಕು ಮತ್ತು ಆರೋಪಗಳಿಂದ ಮುಕ್ತರಾಗಿರಬೇಕು ಎಂಬ ಅರ್ಥವನ್ನು ನೀಡುತ್ತದೆ.