ರಾಷ್ಟ್ರಪತಿ ನಿರ್ಧಾರದ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋದ ಎಎಪಿ
ನವದೆಹಲಿ, ಜನವರಿ 23: ತನ್ನ 20 ಶಾಸಕರನ್ನು ಅನರ್ಹಗೊಳಿಸಿರುವ ಕ್ರಮವನ್ನು ರದ್ದುಗೊಳಿಸುವಂತೆ ಕೋರಿ ಎಎಪಿ ಇಂದು ದೆಹಲಿ ಹೈಕೋರ್ಟ್ ಮೊರೆ ಹೋಗಿದೆ.
ಸಂಸದೀಯ ಕಾರ್ಯದರ್ಶಿಗಳಾಗಿದ್ದ ದೆಹಲಿಯ 20 ಎಎಪಿ ಶಾಸಕರನ್ನು 'ಲಾಭದಾಯಕ ಹುದ್ದೆ' ಹೊಂದಿದ ಆರೋಪದಲ್ಲಿ ಅನರ್ಹಗೊಳಿಸುವಂತೆ ಶುಕ್ರವಾರ ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿತ್ತು. ಈ ವೇಳೆಯೇ ಎಎಪಿ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು.
ಮಧ್ಯ ಪ್ರದೇಶ ಬಿಜೆಪಿಯ 116 ಶಾಸಕರ ಅನರ್ಹತೆಗೆ ಎಎಪಿ ಪಟ್ಟು
ಆದರೆ ಪ್ರಕರಣದಲ್ಲಿ ಮಧ್ಯಂತರ ಆದೇಶ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ್ದರಿಂದ ಎಎಪಿ ಶಾಸಕರ ಆತಂಕ ಮುಂದುವರಿದಿತ್ತು.
ಈ ಆತಂಕದ ನಡುವೆ ಚುನಾವಣಾ ಆಯೋಗದ ಶಿಫಾರಸ್ಸಿಗೆ ಭಾನುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದರು. ಈ ಮೂಲಕ ಎಎಪಿಯ 20 ಶಾಸಕರು ಶಾಸಕತ್ವ ಕಳೆದುಕೊಂಡಿದ್ದರು.
ಶಾಸಕರ ಅನರ್ಹತೆ : ಮಂಗಳವಾರ ಆಪ್ ನಿಂದ ಮತ್ತೊಂದು ಅರ್ಜಿ!
ಎಎಪಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ದೆಹಲಿ ಹೈಕೋರ್ಟ್ ನಾಳೆ ಅಂದರೆ ಬುಧವಾರಕ್ಕೆ ವಿಚಾರಣೆ ನಿಗದಿಪಡಿಸಿದೆ.