ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ನಿರ್ಧಾರದ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋದ ಎಎಪಿ

By Sachhidananda Acharya
|
Google Oneindia Kannada News

ನವದೆಹಲಿ, ಜನವರಿ 23: ತನ್ನ 20 ಶಾಸಕರನ್ನು ಅನರ್ಹಗೊಳಿಸಿರುವ ಕ್ರಮವನ್ನು ರದ್ದುಗೊಳಿಸುವಂತೆ ಕೋರಿ ಎಎಪಿ ಇಂದು ದೆಹಲಿ ಹೈಕೋರ್ಟ್ ಮೊರೆ ಹೋಗಿದೆ.

ಸಂಸದೀಯ ಕಾರ್ಯದರ್ಶಿಗಳಾಗಿದ್ದ ದೆಹಲಿಯ 20 ಎಎಪಿ ಶಾಸಕರನ್ನು 'ಲಾಭದಾಯಕ ಹುದ್ದೆ' ಹೊಂದಿದ ಆರೋಪದಲ್ಲಿ ಅನರ್ಹಗೊಳಿಸುವಂತೆ ಶುಕ್ರವಾರ ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿತ್ತು. ಈ ವೇಳೆಯೇ ಎಎಪಿ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು.

ಮಧ್ಯ ಪ್ರದೇಶ ಬಿಜೆಪಿಯ 116 ಶಾಸಕರ ಅನರ್ಹತೆಗೆ ಎಎಪಿ ಪಟ್ಟುಮಧ್ಯ ಪ್ರದೇಶ ಬಿಜೆಪಿಯ 116 ಶಾಸಕರ ಅನರ್ಹತೆಗೆ ಎಎಪಿ ಪಟ್ಟು

ಆದರೆ ಪ್ರಕರಣದಲ್ಲಿ ಮಧ್ಯಂತರ ಆದೇಶ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ್ದರಿಂದ ಎಎಪಿ ಶಾಸಕರ ಆತಂಕ ಮುಂದುವರಿದಿತ್ತು.

AAP moves HC against disqualification of MLAs

ಈ ಆತಂಕದ ನಡುವೆ ಚುನಾವಣಾ ಆಯೋಗದ ಶಿಫಾರಸ್ಸಿಗೆ ಭಾನುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದರು. ಈ ಮೂಲಕ ಎಎಪಿಯ 20 ಶಾಸಕರು ಶಾಸಕತ್ವ ಕಳೆದುಕೊಂಡಿದ್ದರು.

ಶಾಸಕರ ಅನರ್ಹತೆ : ಮಂಗಳವಾರ ಆಪ್ ನಿಂದ ಮತ್ತೊಂದು ಅರ್ಜಿ!ಶಾಸಕರ ಅನರ್ಹತೆ : ಮಂಗಳವಾರ ಆಪ್ ನಿಂದ ಮತ್ತೊಂದು ಅರ್ಜಿ!

ಎಎಪಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ದೆಹಲಿ ಹೈಕೋರ್ಟ್ ನಾಳೆ ಅಂದರೆ ಬುಧವಾರಕ್ಕೆ ವಿಚಾರಣೆ ನಿಗದಿಪಡಿಸಿದೆ.

English summary
The Aam Aadmi Party (AAP) on Tuesday approached Delhi High Court seeking to quash the disqualification of 20 party MLAs accused of holding the 'office of profit'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X