PM ಹಾಗೂ CM ಪರಿಹಾರ ನಿಧಿಗೆ ಅಮೀರ್ ಖಾನ್ ದೇಣಿಗೆ
ನವದೆಹಲಿ, ಏಪ್ರಿಲ್ 08: ಪ್ರಧಾನಮಂತ್ರಿ ಪರಿಹಾರ ನಿಧಿಗೆ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಾಲಿವುಡ್ ನಟ ಅಮೀರ್ ಖಾನ್ ದೇಣಿಗೆ ನೀಡಿದ್ದಾರೆ. ಕೊರೊನಾ ವೈರಸ್ ತಡೆಗೆ ಅಮೀರ್ ಖಾನ್ ಈ ರೀತಿ ನೆರವಿಗೆ ಬಂದಿದ್ದಾರೆ.
ಅಮೀರ್ ಖಾನ್ ದೇಣಿಗೆ ನೀಡಿರುವ ವಿಷಯವನ್ನು ಸಿನಿಮಾ ವಿಮರ್ಶಕ ತರಣ್ ಆದರ್ಶ್ ತಮ್ಮ ಟ್ವಿಟ್ಟರ್ ಖಾತೆಯೆ ಮೂಲಕ ತಿಳಿಸಿದ್ದಾರೆ. ಆದರೆ, ಅಲ್ಲಿ ಅಮೀರ್ ಖಾನ್ ನೀಡಿರುವ ಹಣದ ಮೊತ್ತವನ್ನು ಬಹಿರಂಗಪಡಿಸಿಲ್ಲ. ಅಮೀರ್ ಖಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿಲ್ಲ.
PM ಪರಿಹಾರ ನಿಧಿಗೆ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ದೇಣಿಗೆ
ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಪರಿಹಾರ ನಿಧಿಯ ಜೊತೆಗೆ ಸಿನಿಮಾ ಕಾರ್ಮಿಕರಿಗೂ ಅಮೀರ್ ನೆರವಾಗಿದ್ದಾರೆ. ತಮ್ಮ ಮುಂದಿನ ಸಿನಿಮಾ 'ಲಾಲ್ ಸಿಂಗ್ ಛಡ್ಡಾ' ಚಿತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಹಾಯ ಮಾಡಲಿದ್ದಾರೆ.
ಬಾಲಿವುಡ್ನ ಅನೇಕ ಸ್ಟಾರ್ಗಳು ಈಗಾಗಲೇ ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದರು. ಆದರೆ, ಅಮೀರ್ ಖಾನ್ ಯಾಕೆ ನೆರವಿಗೆ ಬಂದಿಲ್ಲ ಎನ್ನುವ ಪ್ರಶ್ನೆ ಕೆಲವರಿಗೆ ಇತ್ತು. ಆದರೆ, ಕೊನೆಗೂ ಅಮೀರ್ ಸಹಾಯ ಹಸ್ತಾ ಚಾಚಿದ್ದಾರೆ.
#AamirKhan donates to...
— taran adarsh (@taran_adarsh) April 7, 2020
⭐ #PMCares
⭐ #Maharashtra Chief Minister Relief Fund
⭐ Extended support to the daily wage workers of his forthcoming film #LaalSinghChaddha.#COVID19Pandemic #CoronaVirus #Covid_19 #COVID19
ನಟ ಅಕ್ಷಯ್ ಕುಮಾರ್, ರಜನಿಕಾಂತ್, ಕತ್ರೀನಾ ಕೈಫ್, ಶಾರೂಖ್ ಖಾನ್, ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ, ಸೈಫ್ ಅಲಿ ಖಾನ್, ಕರೀನಾ ಕಪೂರ್ ಸೇರಿದಂತೆ ಅನೇಕರು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.