ತಬ್ಲಿಘಿ ನಂಟು: 2200 ವಿದೇಶಿಗರಿಗೆ 10 ವರ್ಷ ನಿರ್ಬಂಧ ಹೇರಿದ ಭಾರತ
ದೆಹಲಿ, ಜೂನ್ 4: ದೆಹಲಿಯ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸುಮಾರು 2200 ಜನ ವಿದೇಶಿಗರನ್ನು ಭಾರತ ಸರ್ಕಾರ 10 ವರ್ಷಗಳ ಕಾಲ ನಿಷೇಧ ಹೇರಿದೆ ಎಂದು ಮೂಲಗಳು ತಿಳಿಸಿವೆ.
ವೀಸಾ ಉಲ್ಲಂಘನೆ ಮಾಡಿರುವ ಆರೋಪದಲ್ಲಿ 2200 ಜನ ವೀಸಾ ರದ್ದು ಮಾಡಲಾಗಿತ್ತು. ಕೆಲವರ ವಿರುದ್ಧ ಎಫ್ ಐ ಆರ್ ಸಹ ದಾಖಲಾಗಿತ್ತು. ಇದೀಗ, ಆ 2200 ವಿದೇಶಿಗರನ್ನು ಭಾರತ ಪ್ರವೇಶಕ್ಕೆ 10 ವರ್ಷ ನಿರ್ಬಂಧ ಹಾಕಲಾಗಿದೆ.
ದೆಹಲಿ ತಬ್ಲಿಘಿ ಸಮಾವೇಶದಿಂದ ಕೊರೊನಾ ಸೋಂಕು ಹರಡಿತ್ತಾ?: ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ದೆಹಲಿಯಲ್ಲಿ ನಡೆದಿದ್ದ ಧಾರ್ಮಿಕ ಸಮಾವೇಶಕ್ಕೆ ಆಗಮಿಸಿದ್ದ ತಬ್ಲಿಘಿಗಳಲ್ಲಿ ಅನೇಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ವಿದೇಶಿಗರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಜನರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ, ದೇಶಾದ್ಯಂತ ಕೊರೊನಾ ವೈರಸ್ ಹರಡಲು ಕಾರಣವಾಯಿತು ಎಂಬ ಆರೋಪದಡಿ ತಬ್ಲಿಘಿ ಸಮಾವೇಶ ಆಯೋಜಿಸಿದ ಮುಖ್ಯಸ್ಥ ಮೌಲಾನಾ ಸಾದ್ ಸೇರಿದಂತೆ ಅನೇಕರ ವಿರುದ್ಧ ಕೇಸ್ ದಾಖಲಿಸಲಾಗಿತ್ತು.
#UPDATE More than 2,200 blacklisted foreign nationals banned for 10 years from travelling to India for their involvement in Tablighi Jamaat activities: Government Sources https://t.co/9b4t5QpkSt
— ANI (@ANI) June 4, 2020
2200 ವಿದೇಶಿಗರ ಪೈಕಿ 379 ಜನ ಇಂಡೋನೇಶಿಯಾ, 110 ಬಾಂಗ್ಲಾದೇಶದವರು, 63 ಮಂದಿ ಮಯನ್ಮಾರ್, 33 ಮಂದಿ ಶ್ರೀಲಂಕಾ, 75 ಮಂದಿ ಮಲೇಶಿಯಾ, ಅಮೆರಿಕ 9, ಚೈನೀಸ್ 6 ಮಂದಿ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಭಾಗವಹಿಸಿದ್ದರು.
ಮಾರ್ಚ್ ತಿಂಗಳಲ್ಲಿ ನಡೆದಿದ್ದ ತಬ್ಲಿಘಿ ಸಮಾವೇಶದಲ್ಲಿ 9 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರು ಎಂಬ ಮಾಹಿತಿ ಇದೆ.