ಸತ್ಯೇಂದ್ರ ಜೈನ್ ನಿವಾಸದ ಮೇಲೆ ಇಡಿ ದಾಳಿ: 2 ಕೋಟಿ ರು. ನಗದು, 1.8 ಕೆಜಿ ಚಿನ್ನ ಪತ್ತೆ
ನವದೆಹಲಿ ಜೂನ್ 7: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿರಾಗಿರುವ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಸೇರಿದ ಮನೆ, ಕಚೇರಿಗಳ ಮೇಲಿನ ದಾಳಿ ಸಂದರ್ಭದಲ್ಲಿ 2 ಕೋಟಿ ರುಪಾಯಿಗೂ ಹೆಚ್ಚು ನಗದು ಹಾಗೂ 1.8 ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಸೋಮವಾರ ಸತ್ಯೇಂದ್ರ ಜೈನ್ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು.
ಸತ್ಯೇಂದ್ರ ಜೈನ್ ನಿವಾಸದ ಮೇಲೆ ಇಡಿ ದಾಳಿ
ರಾಮ್ ಪ್ರಕಾಶ್ ಜುವೆಲ್ಲರ್ಸ್ ಲಿಮಿಟೆಡ್ ಕಚೇರಿಯಿಂದ 2.23 ಕೋಟಿ ರುಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ವೈಭವ್ ಜೈನ್, ಅಂಕುಶ್ ಜೈನ್, ನವೀನ್ ಜೈನ್ ಈ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಇವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅಕ್ರಮ ಹಣ ವರ್ಗಾವಣೆಯಲ್ಲಿ ಸತ್ಯೇಂದ್ರ ಜೈನ್ ಅವರಿಗೆ ಸಹಾಯ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2015-16ನೇ ಸಾಲಿನಲ್ಲಿ ಕೋಲ್ಕತ್ತಾ ಮೂಲದ ಸಂಸ್ಥೆಯೊಂದಿಗೆ ಹವಾಲಾ ವ್ಯವಹಾರದಲ್ಲಿ ಸತ್ಯೇಂದ್ರ ಜೈನ್ ಭಾಗಿಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಸಿದ್ದರು.
ಆಪ್ ನಾಯಕ ಸತ್ಯೇಂದ್ರ ಜೈನ್ ಮತ್ತು ಅವರ ಕುಟುಂಬದ ಒಡೆತನದಲ್ಲಿ ಇರುವ ಒಟ್ಟು 4.81 ಕೋಟಿ ರು. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತು. ಇದಾದ ಎರಡು ತಿಂಗಳ ನಂತರ ಅಂದರೆ ಮೇ 30 ರಂದು ಇಡಿ ಅವರನ್ನು ಬಂಧಿಸಿತು. ಸತ್ಯೇಂದ್ರ ಜೈನ್ ಅವರನ್ನು ಜೂನ್ 9 ರವರೆಗೆ ಇಡಿ ವಶಕ್ಕೆ ನೀಡಲಾಗಿದೆ.
ಕೇಂದ್ರ ವಿರುದ್ಧ ಕೇಜ್ರಿವಾಲ್ ಆಕ್ರೋಶ
ಸಚಿವ ಸತ್ಯೇಂದ್ರ ಜೈನ್ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. "ನಮ್ಮದು ಅತ್ಯಂತ ಕಟ್ಟುನಿಟ್ಟಾದ ಮತ್ತು ಪ್ರಾಮಾಣಿಕ ಸರಕಾರ. ನಾವು ದೇಶಭಕ್ತರು. ದೇಶಕ್ಕೆ ಎಂದಿಗೂ ದ್ರೋಹ ಮಾಡಲು ಸಾಧ್ಯವಿಲ್ಲ. ಸತ್ಯೇಂದ್ರ ಜೈನ್ ಅವರ ಬಂಧನವು ರಾಜಕೀಯ ಪ್ರೇರಿತವಾಗಿದೆ," ಎಂದು ಸತ್ಯೇಂದ್ರ ಜೈನ್ ಕೇಜ್ರಿವಾಲ್ ಆರೋಪಿಸಿದ್ದರು.
4.81
ಕೋಟಿ
ರು.
ಮೌಲ್ಯದ
ಆಸ್ತಿ
ಮುಟ್ಟುಗೋಲು
ಕೋಲ್ಕತ್ತಾ
ಮೂಲದ
ಕಂಪನಿಗೆ
ಸಂಬಂಧಿಸಿದ
ಅಕ್ರಮ
ಹಣ
ವರ್ಗಾವಣೆ
ಪ್ರಕರಣದಲ್ಲಿ
4.81
ಕೋಟಿ
ರುಪಾಯಿ
ಮೌಲ್ಯದ
ಸ್ಥಿರ
ಆಸ್ತಿಗಳನ್ನು
ಈ
ವರ್ಷದ
ಏಪ್ರಿಲ್ನಲ್ಲಿ
ಜಾರಿ
ನಿರ್ದೇಶನಾಲಯ
ಜಪ್ತಿ
ಮಾಡಿದೆ.
ಸಿಬಿಐ
ದಾಖಲಿಸಿದ
ಎಫ್ಐಆರ್
ಆಧರಿಸಿ
ಜಾರಿ
ನಿರ್ದೇಶನಾಲಯ
ಸತ್ಯೇಂದ್ರ
ಜೈನ್
ವಿರುದ್ಧ
ಕ್ರಿಮಿನಲ್
ಮೊಕದ್ದಮೆ
ದಾಖಲಿಸಿದೆ.
ಇದರಲ್ಲಿ
ಸತ್ಯೇಂದ್ರ
ಜೈನ್
ಷೇರುದಾರರಾಗಿರುವ
ನಾಲ್ಕು
ಕಂಪನಿಗಳಿಂದ
ಪಡೆದ
ಹಣದ
ಮೂಲವನ್ನು
ವಿವರಿಸಲು
ಸಾಧ್ಯವಿಲ್ಲ
ಎಂದು
ಆರೋಪಿಸಿದೆ.
ಅಕ್ರಮ
ಹಣ
ವರ್ಗಾವಣೆ
ಪ್ರಕರಣ
ದಾಖಲು
ಸತ್ಯೇಂದ್ರ
ಜೈನ್
ದೆಹಲಿಯಲ್ಲಿ
ಹಲವಾರು
ಶೆಲ್
ಕಂಪನಿಗಳನ್ನು
ಖರೀದಿಸಿದ್ದಾರೆ
ಮತ್ತು
ಅವುಗಳ
ಮೂಲಕ
16.39
ಕೋಟಿ
ರುಪಾಯಿ
ಮೌಲ್ಯದ
ಕಪ್ಪು
ಹಣವನ್ನು
ಸಕ್ರಮ
ಮಾಡಿಕೊಂಡಿದ್ದಾರೆ
ಎಂದು
ತನಿಖಾ
ಸಂಸ್ಥೆ
ಹೇಳಿದೆ.
ಐಪಿಸಿ
ಸೆಕ್ಷನ್
109
ಮತ್ತು
ಸೆಕ್ಷನ್
13(2)ರ
ಅಡಿ
ಸತ್ಯೇಂದ್ರ
ಜೈನ್
ಮತ್ತು
ಇತರರ
ವಿರುದ್ಧ
ಸಿಬಿಐ
ದಾಖಲಿಸಿರುವ
ಎಫ್ಐಆರ್
ಆಧಾರದ
ಮೇಲೆ
ಇಡಿ
ಅಕ್ರಮ
ಹಣ
ವರ್ಗಾವಣೆ
ಪ್ರಕರಣದ
ತನಿಖೆ
ನಡೆಸುತ್ತಿದೆ.
ಸತ್ಯೇಂದ್ರ
ಜೈನ್
ಅವರು
ಈ
ಹಿಂದೆ
ದೆಹಲಿ
ಸರಕಾರದಲ್ಲಿ
ಗೃಹ,
ಆರೋಗ್ಯ,
ಇಂಧನ
ಮತ್ತು
ಲೋಕೋಪಯೋಗಿ
ಇಲಾಖೆಯಲ್ಲಿ
ಸಚಿವರಾಗಿ
ಕೆಲಸ
ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)