ದೆಹಲಿಯಲ್ಲಿ ತಡರಾತ್ರಿ ಸಿಎಂ ಕೇಜ್ರಿವಾಲ್ ನಿವಾಸದ ಎದುರು ನೆರೆದ ಜನ
ನವದೆಹಲಿ,
ಫೆಬ್ರವರಿ.26:
ರಾಷ್ಟ್ರ
ರಾಜಧಾನಿಯಲ್ಲಿ
ನಡೆಯುತ್ತಿರುವ
ಹಿಂಸಾಚಾರದಲ್ಲಿ
ಇದುವರೆಗೂ
ಮೃತಪಟ್ಟವರ
ಸಂಖ್ಯೆ
13ಕ್ಕೆ
ಏರಿಕೆಯಾಗಿದೆ.
ಇದರ
ಮಧ್ಯೆ
ಸಿಎಂ
ಕೇಜ್ರಿವಾಲ್
ನಿವಾಸದ
ಎದುರು
ಶಾಂತಿ
ಸ್ಥಾಪನೆಯ
ಕೂಗು
ಕೇಳಿ
ಬಂದಿದೆ.
ತಡರಾತ್ರಿ
ದೆಹಲಿ
ಸಿಎಂ
ಅರವಿಂದ್
ಕೇಜ್ರಿವಾಲ್
ನಿವಾಸದ
ಎದುರು
ಅಲುಮಿನಿ
ಅಸೋಸಿಯೇಷನ್
ಆಫ್
ಜಾಮಿಯಾ
ಮಿಲ್ಲಿಯಾ
ಇಸ್ಲಾಮಿಯಾ
ಮತ್ತು
ಜಾಮಿಯಾ
ಸಮನ್ವಯ
ಸಮಿತಿ
ಕಾರ್ಯಕರ್ತರು
ರಾಷ್ಟ್ರ
ರಾಜಧಾನಿಯಲ್ಲಿ
ಶಾಂತಿ
ಮರುಸ್ಥಾಪನೆಗೆ
ಮನವಿ
ಮಾಡಿಕೊಂಡರು.
ಹಿಂಸಾಚಾರದ
ಹಿಂದಿರುವ
ದುಷ್ಕರ್ಮಿಗಳ
ವಿರುದ್ಧ
ಕಠಿಣ
ಕ್ರಮ
ತೆಗೆದುಕೊಳ್ಳುವಂತೆ
ಆಗ್ರಹಿಸಿದರು.
Recommended Video
BREAKING:
ದೆಹಲಿಯಲ್ಲಿ
'ಕಂಡಲ್ಲಿ
ಗುಂಡು'
ಆದೇಶ
ಜಾರಿ
ಈಶಾನ್ಯ
ದೆಹಲಿಯ
ಹಿಂಸಾಚಾರದ
ನಡೆದ
ಪ್ರದೇಶಗಳಲ್ಲಿ
ಆಯಾ
ಕ್ಷೇತ್ರದ
ಶಾಸಕರು
ಶಾಂತಿ
ಸ್ಥಾಪನೆ
ಕುರಿತು
ಜಾಗೃತಿ
ಜಾಥಾ
ನಡೆಸಲು
ಮುಂದಾಗಬೇಕು
ಎಂದು
ಸಿಎಂ
ಬಳಿ
ಜನರು
ಮನವಿ
ಮಾಡಿಕೊಂಡಿದ್ದಾರೆ.
ದೆಹಲಿ
ಪರಿಸ್ಥಿತಿ
ಅವಲೋಕಿಸಿದ
ರಾಷ್ಟ್ರೀಯ
ರಕ್ಷಣಾ
ಸಲಹೆಗಾರ:
ಇನ್ನು,
ದೆಹಲಿಯ
ಸೀಲಂಪುರದಲ್ಲಿ
ರಾಷ್ಟ್ರೀಯ
ರಕ್ಷಣಾ
ಸಲಹೆಗಾರ
ಅಜಿತ್
ದೋವಲ್
ಸಭೆ
ನಡೆಸಿದರು.
ಅಧಿಕಾರಿಗಳು
ಮತ್ತು
ಹಿರಿಯ
ಪೊಲೀಸರ
ಜೊತೆ
ಚರ್ಚೆ
ಬಳಿಕ
ಹಿಂಸಾಚಾರ
ನಡೆದ
ಈಶಾನ್ಯ
ದೆಹಲಿ
ಪ್ರದೇಶಗಳಿಗೆ
ತೆರಳಿ
ಪರಿಸ್ಥಿತಿ
ಪರಿಶೀಲನೆ
ನಡೆಸಿದರು.
ಪರಿಸ್ಥಿತಿ
ನಿಯಂತ್ರಿಸಲು
ಕಂಡಲ್ಲಿ
ಗುಂಡು
ಆದೇಶ:
ದೆಹಲಿಯಲ್ಲಿ
ಕೈಮೀರುತ್ತಿರುವ
ಹಿಂಸಾಚಾರವನ್ನು
ನಿಯಂತ್ರಿಸುವ
ನಿಟ್ಟಿನಲ್ಲಿ
ಕಠಿಣ
ಕ್ರಮವನ್ನು
ದೆಹಲಿ
ಪೊಲೀಸರು
ಕೈಗೊಂಡಿದ್ದು,
'ಕಂಡಲ್ಲಿ
ಗುಂಡು'
ಆದೇಶವನ್ನು
ಜಾರಿಗೊಳಿಸಲಾಗಿದೆ.
ಹಿಂಸಾಚಾರ
ಹೆಚ್ಚು
ನಡೆಯುತ್ತಿರುವ
ಈಶಾನ್ಯ
ದೆಹಲಿಯ
ಭಾಗದಲ್ಲಿ
ಕಂಡಲ್ಲಿ
ಗುಂಡು
ಆದೇಶ
ಜಾರಿ
ಮಾಡಲಾಗಿದ್ದು,
ಯಾರೇ
ರಸ್ತೆಯಲ್ಲಿ
ಕಂಡರೆ
ಅವರಿಗೆ
ಗುಂಡು
ಹೊಡೆಯಲಾಗುವುದು
ಎಂದು
ಪೊಲೀಸರು
ಎಚ್ಚರಿಕೆ
ನೀಡಿದ್ದಾರೆ.
190ಕ್ಕೂ
ಅಧಿಕ
ಮಂದಿಗೆ
ಗಾಯ,
ಜಿಟಿಬಿ
ಆಸ್ಪತ್ರೆಗೆ
ದಾಖಲು:
ದೆಹಲಿ
ಹಿಂಸಾಚಾರದಲ್ಲಿ
ಇದುವರೆಗೂ
190ಕ್ಕೂ
ಅಧಿಕ
ಮಂದಿ
ಗಂಭೀರವಾಗಿ
ಗಾಯಗೊಂಡಿದ್ದು,
ಗಾಯಾಳುಗಳನ್ನು
ಗುರು
ತೇಜ್
ಬಹದ್ದೂರ್
ಆಸ್ಪತ್ರೆಗೆ
ದಾಖಲು
ಮಾಡಲಾಗಿದೆ.