ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಕ್ಕವರಿಗೆಲ್ಲಾ ಕೈತುತ್ತು ತಿನ್ನಿಸಿದರು ಸಚಿವ ಜಮೀರ್ ಅಹ್ಮದ್‌

|
Google Oneindia Kannada News

Recommended Video

ಮೈಸೂರು ದಸರಾ ಆಹಾರ ಮೇಳದಲ್ಲಿ ಸಿಕ್ಕವರಿಗೆಲ್ಲಾ ತುತ್ತು ತಿನ್ನಿಸಿದ ಜಮೀರ್ ಅಹ್ಮದ್ ಖಾನ್ | Oneindia Kannada

ಮೈಸೂರು, ಅಕ್ಟೋಬರ್ 10: ಸಚಿವ ಜಮೀರ್‌ ಅಹ್ಮದ್‌ ಅವರ ಮೈಮೇಲೆ ಸಾಕ್ಷಾತ್‌ ಅನ್ನಪೂರ್ಣೇಶ್ವರಿಯೇ ಬಂದಿದ್ದರೋ ಏನೋ, ಒಟ್ಟಿನಲ್ಲಿ ಸಿಕ್ಕವರಿಗೆಲ್ಲಾ ಕೈತುತ್ತು ತಿನ್ನಿಸಿ ಕೃತಾರ್ಥರಾದರು.

ಹೌದು, ಮೈಸೂರು ದಸರಾ ಉತ್ಸವದಲ್ಲಿ ಆಹಾರ ಮೇಳ ಉದ್ಘಾಟಿಸಿದ ಸಚಿವ ಜಮೀರ್ ಅಹ್ಮದ್ ಅವರು ನೆರೆದಿದ್ದವರೆನ್ನು ಕರೆದು ತಾವೇ ಅವರ ಬಾಯಿಗೆ ತುತ್ತಿಟ್ಟರು.

 Zameer Ahmed inaugurated food festival in mysuru dasara 2018

ಆಹಾರ ಮೇಳ ಉದ್ಘಾಟಿಸಿದ ಸಚಿವರು ಅಂಧ ಮಕ್ಕಳ ಜೊತೆ ಊಟಕ್ಕೆ ಕೂತರು. ತಮ್ಮ ಅಕ್ಕ-ಪಕ್ಕ ಕೂತಿದ್ದ ಮಕ್ಕಳಿಗೆ ತಾವೇ ಊಟ ತಿನ್ನಿಸಿದರು. ಅಷ್ಟಕ್ಕೆ ತೃಪ್ತಿ ಆಗದ ಸಚಿವರು ಅಲ್ಲಿದ್ದ ಪೊಲೀಸ್ ಪೇದೆಗಳನ್ನು ಕರೆದು ಅವರಿಗೂ ತುತ್ತು ಬಾಯಿಗಿಟ್ಟರು.

ದಸರಾ ಚಲನಚಿತ್ರೋತ್ಸವಕ್ಕೆ ಮೆರಗು ತಂದ ಸ್ಯಾಂಡಲ್ ವುಡ್ ಸ್ಟಾರ್ಸ್ದಸರಾ ಚಲನಚಿತ್ರೋತ್ಸವಕ್ಕೆ ಮೆರಗು ತಂದ ಸ್ಯಾಂಡಲ್ ವುಡ್ ಸ್ಟಾರ್ಸ್

ಸ್ವಯಂ ಸೇವಕರಿಗೆ, ಪೊಲೀಸ್ ಅಧಿಕಾರಿಗಳಿಗೆ, ಮಕ್ಕಳಿಗೆ, ಸರ್ಕಾರಿ ಅಧಿಕಾರಿಗಳಿಗೆ, ಆಹಾರ ಮೇಳಕ್ಕೆ ಬಂದ ಸಾರ್ವಜನಿಕರಿಗೆ ಕರೆದು, ಕರೆದು ತುತ್ತು ತಿನ್ನಿಸಿದರು. ತಮ್ಮ ಊಟವಾದ ಬಳಿಕ ಮತ್ತೊಂದು ಪಂಕ್ತಿಗೆ ತಾವೇ ಅಡುಗೆ ಬಡಿಸಿ ಖುಷಿ ಪಟ್ಟರು ಸಚಿವರು.

 Zameer Ahmed inaugurated food festival in mysuru dasara 2018

ಪ್ರೋಟೋಕಾಲ್ ನಲ್ಲಿ ಹೆಸರಿಲ್ಲದಿದ್ದರೂ ದಸರಾ ವೇದಿಕೆ ಏರಿದರು ಆ ಮಹಿಳೆ!ಪ್ರೋಟೋಕಾಲ್ ನಲ್ಲಿ ಹೆಸರಿಲ್ಲದಿದ್ದರೂ ದಸರಾ ವೇದಿಕೆ ಏರಿದರು ಆ ಮಹಿಳೆ!

ಊಟವಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹಳೆಯ ನೆನಪುಗಳಿಗೆ ಜಾರಿದ ಸಚಿವರು, ತಮ್ಮ ತಾತನ ಜೊತೆ ದಸರಾ ನೋಡಲು ಬರುತ್ತಿದ್ದುದನ್ನು ನೆನಪಿಸಿಕೊಂಡರು.

English summary
Minister Zameer Ahmed inaugurated food festival in mysuru dasara 2018 today. He eat food with blind students. He served food to people who came to eat in food festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X