ಈ ಬಾರಿ ಮರಳಿ ಬಂದಿದೆ ಯುವ ದಸರಾ!
ಮೈಸೂರು, ಸೆ.22 : ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಕೆಲವು ದಿನಗಳು ಬಾಕಿ ಉಳಿದಿವೆ. ಸಂತಸದ ಸುದ್ದಿ ಎಂದರೆ, ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಯುವ ದಸರಾ ಈ ಬಾರಿ ನಡೆಯಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿದ್ದು, ದಸರಾಕ್ಕೆ ಆಗಮಿಸುವ ಅತಿಥಿಗಳ ಪಟ್ಟಿ ಸಿದ್ಧಗೊಂಡಿದೆ.
ಅ.7ರಿಂದ
12ರವರೆಗೆ
ಮಹಾರಾಜ
ಕಾಲೇಜು
ಮೈದಾನದಲ್ಲಿ
ಯುವ
ದಸರಾ
ಆಯೀಜಿಸಲಾಗಿದೆ.
ಗಾಯಕರಾದ
ಸೋನು
ನಿಗಮ್,
ಶಾನ್,
ಬೇಬಿ
ಅಂಜನಾ,
ಸುನಿಧಿ
ಚೌಹಾಣ್
ಸೇರಿದಂತೆ
ಮತ್ತಿತರು
ಯುವ
ದಸರಾದಲ್ಲಿ
ಗಾನಸುಧೆ
ಹರಿಸಲಿದ್ದಾರೆ.
ಅ.7ರಂದು ನಟ ಪುನೀತ್ ರಾಜ್ ಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಯವ ದಸರಾಕ್ಕೆ ಚಾಲನೆ ನೀಡಲಿದ್ದಾರೆ. ಅ.7ರಿಂದ 12ರವರೆಗೆ ಆರು ದಿನಗಳ ಕಾಲ ನಾನಾ ಗಾಯಕರು ಯುವ ದಸರಾದಲ್ಲಿ ಭಾಗವಹಿಸಲಿದ್ದು, ದಸರಾಕ್ಕೆ ಮತ್ತಷ್ಟು ರಂಗು ತುಂಬಲಿದ್ದಾರೆ.
ಈ ಬಾರಿಯ ಯುವ ದಸರಾದಲ್ಲಿ ಶಾನ್, ಸುನಿಧಿ ಚೌಹಾಣ್, ವಿಜಯ್ ಪ್ರಕಾಶ್, ಸುಕ್ವೀಂದರ್ ಸಿಂಗ್, ಇಂಡಿಯನ್ ಐಡಲ್ ವಿಜೇತೆ ಅಂಜನಾ, ಕೈಲಾಶ್ ಕೇರ್, ಸೋನು ನಿಗಮ್ ಹಾಗೂ ಡ್ರಮ್ಸ್ ಕಲಾವಿದ ಶಿವಮಣಿ ಇತರ ಕಲಾವಿದರು ಭಾಗವಹಿಸಲಿದ್ದಾರೆ.
28 ಲಕ್ಷ ಸಂಭಾವನೆ : ಯುವ ದಸರಾದಲ್ಲಿ ಎರಡು ತಾಸಿನ ಕಾರ್ಯಕ್ರಮ ನೀಡಲು ಸೋನು ನಿಗಮ್ 28 ಲಕ್ಷ ರೂ.ಸಂಭಾವನೆ ಪಡೆಯಲಿದ್ದಾರೆ. ಅ.12ರಂದು ಕೊನೆಯ ದಿನ ಸೋನು ನಿಗಮ್ ಕಾರ್ಯಕ್ರಮ ನೀಡಲಿದ್ದು, ಅವರಿಗೆ 28 ಲಕ್ಷ ಸಂಭಾವನೆ ನೀಡಲಾಗುತ್ತದೆ ಎಂದು ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್ ಹೇಳಿದ್ದಾರೆ.
ಕಳೆದ ವರ್ಷ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಯುವ ದಸರಾ ರದ್ದುಗೊಳಿಸಲಾಗಿತ್ತು. ಈ ಬಾರ ರಾಜ್ಯದಲ್ಲಿ ಉತ್ತಮ ಮಳೆ ಸುರಿದು ಜನರು ಸಂತಸಗೊಂಡಿದ್ದಾರೆ. ಸಿಎಂ ತಮ್ಮ ತವರು ಜಿಲ್ಲೆಯ ದಸರಾ ಉತ್ಸವವನ್ನು ವಿಜೃಭಂಣೆಯಿಂದ ನಡೆಸಲು ಮುಂದಾಗಿದ್ದಾರೆ. ಆದ್ದರಿಂದ ಯುವ ದಸರಾವನ್ನು ಪುನಃ ಪ್ರಾರಂಭಿಸಲಾಗಿದೆ.