ಅರಮನೆಯಿಂದ ದಸರೆಗೆ ಸಿದ್ಧತೆ ಆರಂಭ: ಯದುವೀರ್ ಒಡೆಯರ್
ಮೈಸೂರು, ಆಗಸ್ಟ್ 7: "ಈ ಬಾರಿ ಅರಮನೆಯ ಸಂಪ್ರದಾಯದಂತೆಯೇ ನಾವು ನಾಡಹಬ್ಬ ದಸರಾ ಆಚರಣೆ ಮಾಡಲು ಎಲ್ಲಾ ಪೂರ್ವಭಾವಿ ತಯಾರಿ ನಡೆಸುತ್ತಿದ್ದೇವೆ" ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಜೋಡಿ
ನಂದಿ
ವಿಗ್ರಹ
ನೋಡಲು
ಅರಸಿನಕೆರೆಗೆ
ಯದುವೀರ್
ಭೇಟಿ
ಇದೇ
ಸೆಪ್ಟೆಂಬರ್
ನಲ್ಲಿ
ನಡೆಯಲಿರುವ
ದಸರಾ
ಸಿದ್ಧತೆಗಳ
ಬಗ್ಗೆ
ಅವರು
ಮಾಹಿತಿ
ನೀಡಿದರು.
ಅಲ್ಲದೇ
ಸರ್ಕಾರ
ತಡವಾಗಿ
ದಸರಾ
ಪೂರ್ವತಯಾರಿಯನ್ನು
ಕೈಗೊಂಡ
ಬಗ್ಗೆ
ಕೇಳಿದಾಗ,
ಅವರು
"ಇದಕ್ಕೆ
ನಾವು
ಉತ್ತರಿಸುವುದಿಲ್ಲ.
ಇದು
ಸರಕಾರಕ್ಕೆ
ಬಿಟ್ಟ
ವಿಚಾರ.
ಅವರು
ಯಾವಾಗ
ಆರಂಭಿಸುತ್ತಾರೋ
ಗೊತ್ತಿಲ್ಲ.
ಅವರ
ಕೆಲಸ
ಮಾಡಲಿ
ಆದರೆ
ಅಭಿವೃದ್ಧಿ
ಕೆಲಸದಲ್ಲಿ
ಮಾತ್ರ
ಅರಮನೆ
ಭಾಗಿಯಾಗಲಿದೆ"
ಎಂದರು.
ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಬಗ್ಗೆ ಉತ್ತರಿಸಿದ ಅವರು, "ಅಂತಹ ಆಲೋಚನೆ ಯಾವುದೂ ಇಲ್ಲ. ಅದರ ಬಗ್ಗೆ ಯೋಚಿಸುವುದೂ ಇಲ್ಲ. ನಾಡಿನ ಅಭಿವೃದ್ಧಿ ಕೆಲಸಗಳಿಗೆ ಮಹಾರಾಜರು ಹಿಂದಿನಿಂದಲೂ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಮುಂದೆಯೂ ಹಾಗೆ ಅರಮನೆ ಜನಸಾಮಾನ್ಯರೊಂದಿಗೆ ಸ್ಪಂದಿಸುತ್ತದೆ" ಎಂದು ತಿಳಿಸಿದ್ದಾರೆ.