ಜೋಡಿ ನಂದಿ ವಿಗ್ರಹ ನೋಡಲು ಅರಸಿನಕೆರೆಗೆ ಯದುವೀರ್ ಭೇಟಿ
ಮೈಸೂರು, ಜುಲೈ 19: ಈಚೆಗೆ ಪತ್ತೆಯಾಗಿರುವ ಜೋಡಿ ನಂದಿ ವಿಗ್ರಹವನ್ನು ನೋಡಲು ಮೈಸೂರಿನ ಅರಸಿನಕೆರೆ ಗ್ರಾಮಕ್ಕೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ಭೇಟಿ ನೀಡಿ ಈ ವಿಗ್ರಹಗಳ ಬಗ್ಗೆ ಮಾಹಿತಿ ಕಲೆಹಾಕಿದರು.
ಕಥೆಯಾಗಿ ಹೇಳುತ್ತಿದ್ದ ದೊಡ್ಡ ನಂದಿ ವಿಗ್ರಹ ಅರಸನಕೆರೆಯಲ್ಲಿ ಕಣ್ಣೆದುರು ಕಂಡಿತು
ವಿಗ್ರಹಗಳ ಕುರಿತು ತಿಳಿಯಲು ಸ್ಥಳಕ್ಕೆ ಭೇಟಿ ನೀಡುವುದಾಗಿ ಈ ಮುನ್ನವೇ ಯುದವೀರ್ ಗ್ರಾಮಸ್ಥರಿಗೆ ತಿಳಿಸಿದ್ದು, ಇಂದು ಬೆಳ್ಳಂಬೆಳಗ್ಗೆ ಅರಸಿನಕೆರೆ ಗ್ರಾಮಕ್ಕೆ ಪುರಾತತ್ವ ತಜ್ಞರಾದ ಡಾ. ರಂಗರಾಜು ಅವರೊಂದಿಗೆ ಬಂದು ಗ್ರಾಮದಲ್ಲಿ ಒಂದು ಸುತ್ತು ಹಾಕಿದರು. ಗ್ರಾಮದ ಮುಖಂಡರ ಜೊತೆಯೂ ಮಾತುಕತೆ ನಡೆಸಿದರು.
ನೀವೇ ರಕ್ಷಿಸಿ, ಇಲ್ಲ ನಮಗಾದರೂ ಬಿಡಿ; ಜೋಡಿ ನಂದಿ ವಿಗ್ರಹ ಸಂರಕ್ಷಣೆಗೆ ಗ್ರಾಮಸ್ಥರ ಒತ್ತಾಯ
ಪುರಾತತ್ವ ತಜ್ಞರು ಹಾಗೂ ಗ್ರಾಮಸ್ಥರಿಂದ ನಂದಿ ವಿಗ್ರಹದ ಕುರಿತಾಗಿ ಮಾಹಿತಿ ಪಡೆದರು. ಎಚ್ ಡಿ ಕೋಟೆ - ಮೈಸೂರು ಮಾರ್ಗದ ಜಯಪುರ ಹೋಬಳಿಯ ಅರಸಿನಕೆರೆ ಮಾರ್ಗದಲ್ಲಿ ಮಣ್ಣಿನಲ್ಲಿ ಹುದುಗಿದ್ದ ಬೃಹತ್ ನಂದಿ ವಿಗ್ರಹಗಳು ಪತ್ತೆಯಾಗಿದ್ದು, ಈ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಯನ್ನು ಆಧರಿಸಿ ಜಿಲ್ಲಾಡಳಿತ ವಿಗ್ರಹಗಳ ಸಂರಕ್ಷಣೆಗೆ ಮುಂದಾಗಿತ್ತು.