ಬೆತ್ತಲೆಗೊಳಿಸಿ ಮಹಿಳೆಗೆ ಥಳಿತ: ದಯಾಮರಣ ಕೋರಿ ಅರ್ಜಿ
ಮೈಸೂರು, ಫೆಬ್ರವರಿ 07 : ನಿವೇಶನ ವಿಚಾರಕ್ಕೆ ಮಹಿಳೆಯ ಬಟ್ಟೆಯನ್ನು ಬಿಚ್ಚಿ ಥಳಿಸಿದ ಅಮಾನವೀಯ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನ ತಟ್ಟೆಕೆರೆಯಲ್ಲಿ ನಡೆದಿದೆ.
ತಟ್ಟೆಕೆರೆ ಲೇ. ಗೋವಿಂದೇಗೌಡ ಪತ್ನಿ ಶೈಲಜಾ ಅವರನ್ನು ದುಷ್ಕರ್ಮಿಗಳು ಥಳಿಸಿದ್ದಾರೆ. ನೊಂದ ಮಹಿಳೆ ಮೈಸೂರಿನ ಜಿಲ್ಲಾಧಿಕಾರಿಗಳಿಗೆ ದಯಾಮರಣ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಶೈಲಜಾ ಮೈದುನ ನಟರಾಜ್ ರಿಂದ ಮನೆ ಮಾರಾಟ ಮಾಡಿದ್ದರು. ಮನೆ ಖರೀದಿ ಮಾಡಿದ್ದ ಶೋಭಾವತಿ , ಡಾ ಮಾರುತಿ ಪ್ರಸಾದ್ ಅವರು ಶೈಲಜಾ ಮೇಲೆ ಹಲ್ಲೆ ಮಾಡಿದ್ದಾರೆ.
ಮನೆ ನೀಡುವಂತೆ ಒತ್ತಾಯ ಮಾಡಿದ ಹಿನ್ನಲೆ ನಿರಾಕರಿಸಿದ್ದಕ್ಕೆ, ನಡು ಬೀದಿಯಲ್ಲಿ ಮನೆ ನೀಡುವಂತೆ ಬಟ್ಟೆ ಬಿಚ್ಚಿ ದುಷ್ಕರ್ಮಿಗಳು ಥಳಿಸಿದ್ದಾರೆ. ನ್ಯಾಯ ಒದಗಿಸುವಂತೆ ಹುಣಸೂರು ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಮನನೊಂದು ರಾಷ್ಟ್ರಪತಿ, ಮುಖ್ಯಮಂತ್ರಿ ಮಂತ್ರಿಗಳಿಗೆ ದಯಾಮರಣ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಪ್ರಯೋಜನವಾಗದ ಹಿನ್ನಲೆ ಜಿಲ್ಲಾಧಿಕಾರಿ ಕಚೇರಿಗೆ ಬಂದ ತಾಯಿ ಶೈಲಜಾ,ಪುತ್ರ ರವಿಯಿಂದ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.