ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಜಂಬೂಸವಾರಿಗೆ ಅಣಿಯಾಗಲು ಅರ್ಜುನನಿಗೆ ಇಂದಿನಿಂದ ಭಾರ ಹೊರುವ ತಾಲೀಮು

|
Google Oneindia Kannada News

ಮೈಸೂರು, ಸೆಪ್ಟೆಂಬರ್ 6: ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆ ಜಂಬೂಸವಾರಿಗೆ ಅಣಿಯಾಗಲು ಕ್ಯಾಪ್ಟನ್ ಅರ್ಜುನನಿಗೆ ಇಂದು ಭಾರ ಹೊರುವ ತಾಲೀಮನ್ನು ನಡೆಸಲಾಯಿತು.

ಯುವ ದಸರೆಗೆ ಚಾಲನೆ ನೀಡಲಿದ್ದಾರೆ ಚಿನ್ನದ ಹುಡುಗಿ ಪಿ.ವಿ ಸಿಂಧುಯುವ ದಸರೆಗೆ ಚಾಲನೆ ನೀಡಲಿದ್ದಾರೆ ಚಿನ್ನದ ಹುಡುಗಿ ಪಿ.ವಿ ಸಿಂಧು

ಅರಮನೆಯ ಆವರಣದಿಂದ ಗಜಪಡೆ, ಸಯ್ಯಜಿರಾವ್ ರಸ್ತೆ ಮೂಲಕ ಹೈವೇ ವೃತ್ತ, ಬನ್ನಿಮಂಟಪವನ್ನು ತಲುಪಿತು. ಕೆಲಕಾಲ ಅಲ್ಲೇ ವಿಶ್ರಾಂತಿ ಪಡೆದು ನಂತರ ಅರಮನೆ ಪ್ರವೇಶಿಸಿದವು.

Weight bearing workout started to Mysuru Dassara elephants

ಗಾದಿ, ಛಾಪು, ಮರಳು ಮೂಟೆ ಹೊತ್ತು ಹೆಜ್ಜೆ ಹಾಕಿದ ಕ್ಯಾಪ್ಟನ್ ಅರ್ಜುನನ ಹಿಂದೆ ಮಿಕ್ಕೆಲ್ಲಾ ಆನೆಗಳು ನಡೆದವು. 350 ಕೆ.ಜಿ ತೂಕ ಮೂಟೆ ಹೊತ್ತ ಅರ್ಜುನನಿಗೆ 750 ಕೆ.ಜಿ.ಅಂಬಾರಿ ಹೊತ್ತು ಸಾಗುವ ಮುನ್ನ ಭಾರ ಹೊರುವ ತಾಲೀಮು ನಡೆಸಲಾಗುವುದು. ಅರಮನೆಯಿಂದ ಬನ್ನಿಮಂಟಪದವರೆಗೆ ಮೊದಲ ಹಂತದ ಗಜಪಡೆ ಸಾಗಿತು. ಮೊದಲ ದಿನಗಳಲ್ಲಿ ಅರ್ಜುನನಿಗೆ ಭಾರ ಹೊರುವ ತಾಲೀಮು ನಡೆಸಲಾಗಿದ್ದು, ನಂತರದ ದಿನಗಳಲ್ಲಿ ಅಭಿಮನ್ಯು ಹಾಗೂ ಧನಂಜಯನಿಗೂ ಈ ತಾಲೀಮು ನಡೆಯುತ್ತದೆ.

 ಅಂಬಾರಿ ಹೊರುವ ಅರ್ಜುನ ಆನೆಯ ಮಾವುತ, ಕಾವಾಡಿ ಆಯ್ಕೆಯಲ್ಲೂ ರಾಜಕೀಯ ಅಂಬಾರಿ ಹೊರುವ ಅರ್ಜುನ ಆನೆಯ ಮಾವುತ, ಕಾವಾಡಿ ಆಯ್ಕೆಯಲ್ಲೂ ರಾಜಕೀಯ

ಇಂದಿನಿಂದ ನಿತ್ಯ ಮರಳಿನ ಅರ್ಜುನ ಆನೆಗೆ ಮೂಟೆ ಹೊರಿಸಿ ತಾಲೀಮು ನಡೆಸಿದ್ದು, ಬಳಿಕ ದಿನ ಬಿಟ್ಟು ದಿನ ಅಭಿಮನ್ಯು, ಗಜೇಂದ್ರ ಹಾಗೂ ಅಭಿಮನ್ಯು, ಈಶ್ವರ ಆನೆಗಳಿಗೂ ಭಾರ ಹೊರುವ ತಾಲೀಮು ನಿಗದಿ ಮಾಡಲಾಗುತ್ತದೆ ಎಂದು ಆನೆ ವೈದ್ಯರು ತಿಳಿಸಿದ್ದಾರೆ.

English summary
Weight bearing workout started to Mysuru Dassara elephants. Today Arjuna elephant lifted 400 kg Bag easily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X