ಜೆಡಿಎಸ್ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಎಚ್. ವಿಶ್ವನಾಥ್ ನೇಮಕ?
Recommended Video
ಮೈಸೂರು,
ಆಗಸ್ಟ್
3
:
ಜಾ.ದಳ
ನೂತನ
ರಾಜ್ಯಾಧ್ಯಕ್ಷರಾಗಿ
ಮಾಜಿ
ಸಚಿವ,
ಹುಣಸೂರಿನ
ಶಾಸಕ
ಅಡಗೂರು
ಎಚ್.ವಿಶ್ವನಾಥ್
ನೇಮಕಗೊಂಡಿದ್ದಾರೆ
ಎಂದು
ಮೂಲಗಳು
ತಿಳಿಸಿವೆ.
ಜಾ.ದಳ
ವರಿಷ್ಠ
ಎಚ್.ಡಿ.ದೇವೇಗೌಡ
ಅವರೇ
ಖುದ್ದು
ದೂರವಾಣಿ
ಕರೆ
ಮಾಡಿ
ವಿಶ್ವನಾಥ್
ಅವರಿಗೆ
ಈ
ವಿಷಯ
ತಿಳಿಸಿದ್ದಾರೆ.
ವಿಶ್ವನಾಥ್ ಅವರು ಕೂಡ ಈ ಹೊಸ ಜವಾಬ್ದಾರಿ ನಿಭಾಯಿಸಲು ಸಮ್ಮತಿಸಿದ್ದಾರೆ. ಆಷಾಢದ ಬಳಿಕ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಜಾ.ದಳ ನೂತನ ರಾಜ್ಯಾಧ್ಯಕ್ಷರ ನೇಮಕದ ಅಧಿಕೃತ ಘೋಷಣೆ ಆ.5ರಂದು ಹೊರಬೀಳುವ ಸಾಧ್ಯತೆ ಇದೆ.
ಜೆಡಿಎಸ್ಗೆ ರಾಜ್ಯಾಧ್ಯಕ್ಷರು, ನಾಲ್ವರು ಕಾರ್ಯಾಧ್ಯಕ್ಷರ ನೇಮಕ
ಜೆಡಿಎಸ್ ಮುಖ್ಯಸ್ಥ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಶ್ವನಾಥ್ ಅವರನ್ನು ನೂತನ ರಾಜಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಉದ್ದೇಶಿಸಿದ್ದು, ಖುದ್ದು ದೇವೇಗೌಡರೇ ವಿಶ್ವನಾಥ್ ಅವರೊಂದಿಗೆ ಮಾತುಕತೆ ಕೂಡ ನಡೆಸಿದ್ದಾರೆ.
ಪ್ರಸ್ತುತ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಎಚ್.ಡಿ.ಕುಮಾರಸ್ವಾಮಿ, ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿರುವ ಕಾರಣ ಎಚ್.ವಿಶ್ವನಾಥ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ದೇವೇಗೌಡರು ನಿರ್ಧರಿಸಿದ್ದಾರೆ ಎನ್ನಲಾಗಿದೆ. "ಈ ಮಧ್ಯೆ ಮಾಜಿ ಪ್ರಧಾನಿ ದೇವೇಗೌಡರು ಇದರ ಬಗ್ಗೆ ತಮ್ಮಲ್ಲಿ ಪ್ರಸ್ತಾಪಿಸಿದ್ದರು.
ಆದರೆ ತಾವೂ ಈ ವಿಚಾರದಲ್ಲಿ ಮಾತನಾಡುವುದಾಗಿ ಹೇಳಿದ್ದು, ಒಂದು ವೇಳೆ ಆ ಸ್ಥಾನಕ್ಕೆ ನನ್ನನ್ನು ನೇಮಕ ಮಾಡಿದರೆ, ಅವರ ಪ್ರೀತಿ ವಿಶ್ವಾಸ, ನಂಬಿಕೆಗೆ ಬದ್ಧನಾಗಿ ಒಪ್ಪಿಕೊಳ್ಳುವುದಾಗಿ" ವಿಶ್ವನಾಥ್ ತಿಳಿಸಿದ್ದಾರೆ.