ದಸರಾ ಹಿನ್ನೆಲೆ ಸಚಿವ ಸೋಮಣ್ಣ ಅವರಿಂದ ಸ್ವಚ್ಛತಾ ಪರಿಶೀಲನೆ
ಮೈಸೂರು, ಸೆಪ್ಟೆಂಬರ್ 21: ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ಶನಿವಾರ ಬೆಳ್ಳಂಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಸ್ವಚ್ಛತೆಯನ್ನು ಪರಿಶೀಲಿಸಿದರು.
ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ ದಸರಾ ಸಿದ್ಧತೆ
ಈ ಸಂದರ್ಭ ಮಾತನಾಡಿದ ಅವರು, "ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ದಸರಾಗೆ ಮೈಸೂರಿಗೆ ಆಗಮಿಸುತ್ತಿದ್ದಾರೆ. ನಗರದ ಅಂದ ಹೆಚ್ಚಿಸಲು ಸ್ವಚ್ಛತೆ ಕಾಯ್ದುಕೊಳ್ಳಬೇಕಿದೆ ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ" ಎಂದರು.
15 ದಿನಗಳ ದಸರಾ ರಜೆ ಮನವಿಯನ್ನು ಪುರಸ್ಕರಿಸಿದ ರಾಜ್ಯ ಸರಕಾರ
ಇದೇ ಸಂದರ್ಭ, ಬೆಟ್ಟಕ್ಕೆ ಹೋಗುವ ಮೆಟ್ಟಿಲು ಮಾರ್ಗವನ್ನು ಸ್ವಚ್ಛಗೊಳಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು. ಬೆಟ್ಟದ ಮೇಲೆ ಅಳವಡಿಸಲಾಗಿರುವ ಹೈ ಮಾಸ್ಕ್ ವಿದ್ಯುತ್ ದೀಪಕ್ಕೆ ಚಾಲನೆ ನೀಡಿದರು. ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ, ಜಿಪಂ ಮುಖ್ಯಾಧಿಕಾರಿ ಜ್ಯೋತಿ, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸಚಿವರಿಗೆ ಸಾಥ್ ನೀಡಿದರು.
Comments
English summary
District Minister V Somanna visited Chamundi Hill on Saturday morning to inspect the cleanliness. Speaking on this, he said, "Dasara is coming. so many tourist will come to Mysore. Cleanliness is the first priority of the city".