ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ನೂತನ ಉಸ್ತುವಾರಿ ಸಚಿವರಾಗಿ ಸೋಮಣ್ಣ ನೇಮಕ

|
Google Oneindia Kannada News

ಮೈಸೂರು, ಆಗಸ್ಟ್ 22: ಸಚಿವ ವಿ.ಸೋಮಣ್ಣ ಅವರು ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ನೇಮಕವಾಗಿದ್ದು, ಸರ್ಕಾರದ ತುರ್ತು ಆದೇಶ ಹೊರಬಂದಿದೆ.

ಆಪರೇಷನ್ ಕಾಂಗ್ರೆಸ್ ಶುರು? ಸಿದ್ದರಾಮಯ್ಯಗೆ ಉಮೇಶ್ ಕತ್ತಿ ಕರೆ?ಆಪರೇಷನ್ ಕಾಂಗ್ರೆಸ್ ಶುರು? ಸಿದ್ದರಾಮಯ್ಯಗೆ ಉಮೇಶ್ ಕತ್ತಿ ಕರೆ?

ಪತ್ರದಲ್ಲಿ ವಿ ಸೋಮಣ್ಣ ಅವರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಲಾಗಿದೆ. ನಾಡ ಹಬ್ಬ ದಸರಾ ಸಮೀಪಿಸುತ್ತಿದ್ದು, ದಸರಾ ಸಿದ್ಧತೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಅವಶ್ಯಕತೆ ತುರ್ತು ಇರುವುದರಿಂದ ರಾಜ್ಯ ಸರ್ಕಾರ ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಯವರನ್ನು ಮಾತ್ರವೇ ನೇಮಕ ಮಾಡಿದೆ ಎನ್ನಲಾಗಿದೆ.

V Somanna appointed as a new Mysuru in charge minister

ಸಚಿವ ಸಂಪುಟ ವಿಸ್ತರಣೆ ಬಳಿಕ ಪ್ರವಾಹ ಪರಿಶೀಲನೆಗಾಗಿ ಆರ್. ಅಶೋಕ್ ಅವರನ್ನು ಮೈಸೂರಿನ ಉಸ್ತುವಾರಿ ಆಗಿ ಮಾಡಲಾಗಿತ್ತು. ಆಗ ಅಶೋಕ್ ಅವರೇ ಜಿಲ್ಲಾ ಉಸ್ತುವಾರಿ ಆಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇಂದು ಬೆಳಗ್ಗೆ ದಸರಾ ಗಜಪಡೆಗೆ ಚಾಲನೆ ನೀಡುವಾಗ ಸೋಮಣ್ಣ ಅವರು "ಮೈಸೂರಿನ ಉಸ್ತುವಾರಿ ಆರ್. ಅಶೋಕ್ ಆದರೆ ನನಗೆ ಸಂತೋಷ" ಎಂದು ಹೇಳಿದ್ದರು. ಇದೀಗ ಸರ್ಕಾರ ವಿ. ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಆಗಿ ನೇಮಿಸಿ ಆದೇಶ ಹೊರಡಿಸಿದೆ.

English summary
V Somanna appointed as a new Mysuru in charge minister. State government has been issued order on immediate effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X