ಮೈಸೂರು; ಒಬ್ಬಂಟಿ ಓಡಾಡುತ್ತಿದ್ದವರ ಸುಲಿಗೆ ಮಾಡುತ್ತಿದ್ದ ಇಬ್ಬರ ಬಂಧನ
ಮೈಸೂರು, ನವೆಂಬರ್ 18: ಒಬ್ಬಂಟಿಯಾಗಿ ಸಂಚರಿಸುವವರನ್ನು ಬೆದರಿಸಿ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಉದಯಗಿರಿ ಪೊಲೀಸರು 45 ಸಾವಿರ ಮೌಲ್ಯದ 1 ಲ್ಯಾಪ್ಟಾಪ್, 1 ಮೊಬೈಲ್ ಫೋನ್, ದ್ವಿಚಕ್ರ ವಾಹನ ಹಾಗೂ ಅಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ.
ಕಲ್ಯಾಣಗಿರಿ ನಗರದ ಮೊಹಮ್ಮದ್ ಜಮೀರ್ ಉರ್ ರೆಹಮಾನ್ (20), ರಾಘವೇಂದ್ರ ಬಡಾವಣೆ ಶೋಯಬ್ ಅಕ್ತರ್ (21) ಬಂಧಿತರು.
ಮೈಸೂರು
ಜಿಲ್ಲೆಗೆ
ಕಂಟಕರಾಗಿದ್ದ
ದರೋಡೆಕೋರರ
ಬಂಧನ
ನ.13ರಂದು
ಶಕ್ತಿನಗರದಲ್ಲಿ
ಶ್ರೀರಾಗ್
ಎಂಬುವರು
ಹೂ
ಬಿಡಿಸುತ್ತಿದ್ದಾಗ
ದ್ವಿಚಕ್ರ
ವಾಹನದಲ್ಲಿ
ಬಂದ
ವ್ಯಕ್ತಿಯೊಬ್ಬ
ಚಾಕು
ತೋರಿಸಿ
ಬೆದರಿಸಿ,
ಹಲ್ಲೆ
ಮಾಡಿ,
ಮೊಬೈಲ್
ಫೋನನ್ನು
ಬಲವಂತವಾಗಿ
ಕಿತ್ತುಕೊಂಡು
ಪರಾರಿಯಾಗಿದ್ದ.
ಅದೇ
ದಿನ
ಸಂಜೆ
ಕಲ್ಯಾಣಗಿರಿ
ನಗರದಲ್ಲಿ
ಮತ್ತೊಬ್ಬ,
ಮೊಹಮ್ಮದ್
ಜವಾದ್
ಎಂಬುವವರ
ಮನೆಗೆ
ನುಗ್ಗಿ,
10
ಸಾವಿರ
ರೂ.
ಹಣ
ಕೊಡುವಂತೆ
ಚಾಕು
ತೋರಿಸಿ
ಬೆದರಿಕೆ
ಒಡ್ಡಿ,
ಮನೆಯಲ್ಲಿದ್ದ
ಲ್ಯಾಪ್ಟಾಪ್
ತೆಗೆದುಕೊಂಡು
ಹೋಗಿದ್ದ.
ಉದಯಗಿರಿ
ಠಾಣೆಯಲ್ಲಿ
ಈ
ಕುರಿತು
ಎರಡು
ಪ್ರತ್ಯೇಕ
ಪ್ರಕರಣಗಳು
ದಾಖಲಾಗಿದ್ದವು.
ತನಿಖೆ ಕೈಗೊಂಡ ಉದಯಗಿರಿ ಪೊಲೀಸರು, ನ.17ರಂದು ರಾಜೀವನಗರ ಮಾದೇಗೌಡ ವೃತ್ತದ ಬಳಿ ಮೊಬೈಲ್ ಮತ್ತು ಲ್ಯಾಪ್ಟಾಪ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಇವರನ್ನು ಬಂಧಿಸಿದ್ದಾರೆ. ಡಿಸಿಪಿ ಗೀತ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ.