ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿ ಇಬ್ಬರು ಸಿಬ್ಬಂದಿ ಸಾವು
ಮೈಸೂರು, ಏಪ್ರಿಲ್ 25: ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಮೀನು ಹಿಡಿಯಲು ತೆರಳಿದ್ದ ಸಂದರ್ಭ ಕಬಿನಿ ಹಿನ್ನೀರಿನಲ್ಲಿ ಬೋಟ್ ಮಗುಚಿ ಇಬ್ಬರು ಅರಣ್ಯ ಸಿಬ್ಬಂದಿ ಜಲಸಮಾಧಿಯಾದ ಘಟನೆ ನಡೆದಿದೆ.
Recommended Video
13
ಮೀನುಗಾರರನ್ನ
ರಕ್ಷಿಸಿದ
ಮಂಗಳೂರು
ಕೋಸ್ಟ್
ಗಾರ್ಡ್
|
Oneindia
Kannada
ಎಚ್.ಡಿ.ಕೋಟೆ ತಾಲೋಕಿನ ಎನ್.ಬೇಗೂರಿನ ಗುಂಡ್ರೆ ಅರಣ್ಯ ವಲಯ ಕಬಿನಿ ಹಿನ್ನೀರಿನಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಹಿರಿಯ ಅಧಿಕಾರಿಗಳು ಮೀನು ಹಿಡಿಯುವಂತೆ ತಿಳಿಸಿದ್ದು, ಮೀನು ಹಿಡಿಯಲು ನಾಲ್ವರು ತೆರಳಿದ್ದರು. ಆದರೆ ಹಿನ್ನೀರಿನಲ್ಲಿ ಬೋಟ್ ಮಗುಚಿಬಿದ್ದಿದೆ. ನಾಲ್ವರಲ್ಲಿ ಇಬ್ಬರು ಈಜಿ ದಡ ಸೇರಿದ್ದಾರೆ. ಮತ್ತಿಬ್ಬರು ಸಿಬ್ಬಂದಿ ಶಿವಕುಮಾರ್ ಹಾಗೂ ಮಹೇಶ ಮೃತಪಟ್ಟಿದ್ದಾರೆ. ಶಿವಕುಮಾರ್ ಮೃತದೇಹ ಪತ್ತೆಯಾಗಿದ್ದು, ಮಹೇಶ್ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ.
ಘಟನಾ ಸ್ಥಳಕ್ಕೆ ಅರಣ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
English summary
Two forest department staff died while fishing in kabini backwater. This incident happened yesterday late night,