ಸಮಸ್ಯೆ ಹೇಳಿ, ಧಿಕ್ಕಾರ ಕೂಗಬೇಡಿ: ಸಚಿವ ಜಿ.ಟಿ.ದೇವೇಗೌಡ
ಮೈಸೂರು, ಜೂನ್ 27 : ಸಿಎಂ ಗ್ರಾಮ ವಾಸ್ತವ್ಯ ಮಾಡುವ ವೇಳೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕೇ ವಿನಃ ಧಿಕ್ಕಾರ ಕೂಗುವುದಲ್ಲ ಎಂದಿದ್ದಾರೆ ಸಚಿವ ಜಿ ಟಿ ದೇವೇಗೌಡ.
ಸಿಎಂ ಗ್ರಾಮವಾಸ್ತವ್ಯಕ್ಕೆ ಬಿಜೆಪಿಯೇ ಅಡ್ಡಿ; ಎಚ್. ವಿಶ್ವನಾಥ್
ಗ್ರಾಮ ವಾಸ್ತವ್ಯದ ವೇಳೆ ಸಿಎಂ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳ ಮುಂದೆ ಬಿಜೆಪಿ ಪ್ರತಿಭಟನೆ ಮಾಡಿದ್ದು ಸರಿಯಲ್ಲ. ಬಿಜೆಪಿ ಅಥವಾ ಯಾವುದೇ ಪಕ್ಷದವರಾಗಲಿ ಮುಖ್ಯಮಂತ್ರಿಗಳ ಜೊತೆ ಕ್ಷೇತ್ರದ ಕೆಲಸಗಳ ಬಗ್ಗೆ ಮಾತನಾಡಬೇಕಿತ್ತು. ಗ್ರಾಮ ವಾಸ್ತವ್ಯ ಮಾಡುವ ವೇಳೆ ಬಿಜೆಪಿ ಈ ರೀತಿ ಪ್ರತಿಭಟನೆ ಮಾಡಬಾರದಿತ್ತು. ಈ ಸಮಯದಲ್ಲಿ ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಮಾತನಾಡಬೇಕೇ ವಿನಃ ಬೇರೆ ವಿಚಾರ ಸಲ್ಲದು ಎಂದರು.
ಕುಮಾರಸ್ವಾಮಿ ಅವರು ಪ್ರತಿಭಟನಾಕಾರರ ಮೇಲೆ ಗರಂ ಆಗಿದ್ದ ವಿಷಯಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ಕೊಡಲಿಲ್ಲ.
Comments
gt devegowda hd kumaraswamy bjp village stay mysuru ಜಿ ಟಿ ದೇವೇಗೌಡ ಎಚ್ ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಬಿಜೆಪಿ ಮೈಸೂರು
English summary
Try to solve your problems, dont shout instead said Minister G T Devegowda. He reacted to the BJP protest against the village stay of CM kumaraswamy.
Story first published: Thursday, June 27, 2019, 16:14 [IST]