ದಸರಾ ಉದ್ಘಾಟನೆ, ವಿಜಯದಶಮಿ ಮೆರವಣಿಗೆಗೆ ಸಮಯ ನಿಗದಿ
ಮೈಸೂರು, ಅಕ್ಟೋಬರ್. 8 : ಅಕ್ಟೋಬರ್ 10 ರಿಂದ 19ವರೆಗೆ ನಡೆಯಲಿರುವ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅಕ್ಟೋಬರ್ 10ರಂದು ಬುಧವಾರ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆಯ ಮೂಲಕ ವಿದ್ಯುಕ್ತ ಚಾಲನೆ ದೊರೆಯಲಿದೆ.
ದಸರಾಗೆ ಬೆಂಗಳೂರು- ಮೈಸೂರು ನಡುವೆ ವಿಶೇಷ ರೈಲು ಸಂಚಾರ
ಚಾಮುಂಡಿ ಬೆಟ್ಟದಲ್ಲಿ ಅಕ್ಟೋಬರ್ 10ರಂದು ಬೆಳಗ್ಗೆ 07-05 ರಿಂದ 07-35 ರ ವರೆಗೆ ಸಲ್ಲುವ ತುಲಾ ಲಗ್ನದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಚಾಮುಂಡಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿಯವರು ವಿಶ್ವವಿಖ್ಯಾತ ದಸರಾ ಉದ್ಘಾಟಿಸಲಿದ್ದಾರೆ.
ದಸರೆಗೆ 4 ದಿನ ಇರುವಾಗಲೇ 200ಕ್ಕೂ ಹೆಚ್ಚು ಗೋಲ್ಡ್ ಕಾರ್ಡ್ ಗಳ ಮಾರಾಟ
ದಸರಾ ಉದ್ಘಾಟನೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿ ಸಚಿವ ಸಂಪುಟದ ಹಲವರು ಭಾಗಿಯಾಗಲಿದ್ದಾರೆ.
ವಿಜಯದಶಮಿ
ಮೆರವಣಿಗೆ
ಸಮಯ
ನಿಗದಿ
ಅಕ್ಟೋಬರ್
19
ರಂದು
ಪ್ರಮುಖ
ಆಕರ್ಷಣೆ
ಜಂಬೂಸವಾರಿ
ನಡೆಯಲಿದೆ.
ಅಂದು
ಮಧ್ಯಾಹ್ನ
2.30
ರಿಂದ
3.16
ರೊಳಗಿನ
ಶುಭ
ಕುಂಭ
ಲಗ್ನದಲ್ಲಿ
ಅರಮನೆಯ
ಬಲರಾಮ
ದ್ವಾರದಲ್ಲಿ
ನಂದಿಧ್ವಜಕ್ಕೆ
ಮುಖ್ಯಮಂತ್ರಿ
ಕುಮಾರಸ್ವಾಮಿ
ಪೂಜೆ
ಸಲ್ಲಿಸಲಿದ್ದಾರೆ.
ದಸರಾ ಉದ್ಘಾಟನೆ - ಸಾಮಾನ್ಯಳಿಗೆ ಸಿಕ್ಕ ದೊಡ್ಡ ಸನ್ಮಾನ : ಸುಧಾ ಮೂರ್ತಿ
ನಂತರ 3.40 ರಿಂದ 4.10 ರೊಳಗಿನ ಶುಭ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆ ಆರಂಭವಾಗಲಿದ್ದು, ಕ್ಯಾಪ್ಟನ್ ಅರ್ಜುನ ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪೂಜೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ಸಿಗಲಿದೆ.