ಮೂವರು ಪಾದ್ರಿಗಳಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ:ಎಫ್ ಐಆರ್ ದಾಖಲು
ಮೈಸೂರು, ಫೆಬ್ರವರಿ 4:ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮೈಸೂರಿನ ಅಪ್ರಾಪ್ತ ಬಾಲಕಿಯನ್ನು ಮಂಗಳೂರಿಗೆ ಕರೆದೊಯ್ದ ಮೂವರು ಪಾದ್ರಿಗಳು ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಎಫ್ ಐ ಆರ್ ದಾಖಲಾಗಿದೆ.
ನಿನಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ ಹಾಗೂ ತಾಯಿಗೆ ಮನೆ ಕಟ್ಟಲು 1 ಲಕ್ಷ ಕೊಡುವುದಾಗಿ ಆಮಿಷವೊಡ್ಡಿ ಸೆಬಾಸ್ಟಿಯನ್ ಎಂಬಾತ ಬಾಲಕಿಯನ್ನು ಮತ್ತಿಬ್ಬರು ಪಾದ್ರಿಗಳೊಂದಿಗೆ ಸೇರಿ ನವೆಂಬರ್ ನಲ್ಲಿ ಮಂಗಳೂರಿಗೆ ಕರೆದೊಯ್ದಿದ್ದಾನೆ.
ಮಳವೂರಿಯಲ್ಲಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ:ಯುವಕನ ಬಂಧನ
ಮೈಸೂರಿನ ಎನ್.ಆರ್.ಮೊಹಲ್ಲಾದ ಬಾಲಕಿಯಾದ ಆಕೆಯನ್ನು ಬಲಾತ್ಕಾರವೆಸಗಿದ್ದಲ್ಲದೇ ಆಕೆಯ ಮೇಲೆ ಸೆಬಾಸ್ಟಿಯನ್ ಮತ್ತು ಸ್ನೇಹಿತರು ಜಾತಿ ನಿಂದನೆ ಕೂಡ ಮಾಡಿದ್ದಾರೆ. ಘಟನೆಯ ಬಳಿಕ ಹೇಗೋ ತಪ್ಪಿಸಿಕೊಂಡು ಬಾಲಕಿ ಮೈಸೂರಿಗೆ ಬಂದಿದ್ದಾಳೆ.
ತಾಯಿಯ ಸಹಾಯದೊಂದಿಗೆ ಸ್ವಸಹಾಯ ಸಂಘದ ನೆರವಿನಿಂದ ಬೆಂಗಳೂರಿನ ಹೈಕೋರ್ಟ್ ನಲ್ಲಿ ಬಾಲಕಿ ದೂರು ಸಲ್ಲಿಸಿದ್ದಾಳೆ. ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮೈಸೂರು ಕಮೀಷನರ್ ಗೆ ಹೈಕೋರ್ಟ್ ಸೂಚನೆ ನೀಡಿದೆ. ಘಟನೆ ಬೆಳಕಿಗೆ ಬರುತ್ತಿದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ.
ಅತ್ಯಾಚಾರದಿಂದ ಯುವತಿ ರಕ್ಷಿಸಿದ ಬೀದಿ ನಾಯಿಗೆ ಚಾಕು ಇರಿತ
ಮೈಸೂರಿನ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಸೆಬಾಸ್ಟಿಯನ್ ಹಾಗೂ ಇತರೆ ಆರೋಪಿಗಳ ಮೇಲೆ ಪೋಸ್ಕೋ ಕಾಯ್ದೆ ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು ಆರೋಪಿಗಳ ಶೋಧ ಕಾರ್ಯ ಚುರುಕುಗೊಂಡಿದೆ.