ಟಿ.ನರಸೀಪುರದಲ್ಲಿ ಬೈಕ್ ಅಪಘಾತ; ಬಸ್ ಗೆ ಕಾಯುತ್ತಿದ್ದ ಮೂವರ ಸಾವು
ಮೈಸೂರು, ಫೆಬ್ರವರಿ 21: ಬಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಬೈಕ್ ಹರಿದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ಕಡೆಯಿಂದ ವೇಗವಾಗಿ ಬಂದ ಸವಾರ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಅಡ್ಡಲಾಗಿ ಬಂದ ಮೊಪೆಡ್ಗೆ ಗುದ್ದಿದ್ದಾನೆ. ಆಗ ಬಸ್ಗೆ ಕಾಯುತ್ತಿದ್ದವರ ಮೇಲೆ ಬೈಕ್ ಹರಿದು ಒಟ್ಟು ಮೂವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಬೈಕ್ ಸವಾರ ಸಾಯಿಮಾನ್ ಸೇಠ್ ವೇಗವಾಗಿ ಬರುತ್ತಿದ್ದ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದು, ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಸಿಗ್ನಲ್ ಜಂಪ್ ಮಾಡೋ ಮುನ್ನ ಈ ವಿಷಯ ನಿಮ್ಮ ನೆನಪಿನಲ್ಲಿರಲಿ...
ಮೃತರನ್ನು ಚಿಕ್ಕಣ್ಣಮ್ಮ, ಬಸವರಾಜು ಹಾಗೂ ದಾಸಪ್ಪ ಎಂದು ಗುರುತಿಸಲಾಗಿದೆ. ಇನ್ನಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬೈಕ್ ಸವಾರನ ಸ್ಥಿತಿಯೂ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತಕ್ಕೆ ಕಾರಣವಾದ ವ್ಯಕ್ತಿ ಕೇರಳದವ ಎನ್ನಲಾಗಿದೆ. ಈ ಸಂಬಂಧ ಟಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.